ಸಿನಿಮಾ

justice for madhu ಅಭಿಯಾನಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ..

ರಾಯಚೂರಿ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನಾ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗಬೇಕು. ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನುಬದ್ಧವಾಗಿ ಶಿಕ್ಷೆಯಾಗಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. justice for madhu ಹೆಸರಿನಲ್ಲಿ ಅಭಿಯಾನವು ಸಹ ನಡೆಯುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಹ ಬೆಂಬಲ ಸೂಚಿಸುತ್ತಿದ್ದಾರೆ…ಹಲವು ನಟ- ನಟಿಯರು ಕೃತ್ಯವನ್ನ ಖಂಡಿಸಿದ್ರು. ಮಧು ಸಾವಿನ ತನಿಖೆ ಅತೀ ಶೀಘ್ರದಲ್ಲಿ ಆಗಬೇಕು..ಅತ್ಯಾಚಾರ ಹಾಗೂ ಕೊಲೆಯ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ರೂಪುಗೊಳ್ಳಬೇಕು ಎಂದು ದರ್ಶನ್ ಟ್ವೀಟ್ ಕೂಡ ಮಾಡಿದ್ದಾರೆ. ಇವತ್ತು ನಟಿ ಹರ್ಷಿಕಾ ಪೂಣಚ್ಚ ...

Read More »

ರಿಷಬ್ ಶೆಟ್ಟಿ ಕುಟುಂಬಕ್ಕೆ ‘ಹೀರೋ’ ಆಗಮನ..

ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿ ತಂದೆ ತಾಯಿಯಾಗಿದ್ದಾರೆ.. ಇತ್ತೀಚಿಗೆ ತೆರ ಕಂಡ ‘ಬೆಲ್ ಬಾಟಂ’ ಸಿನಿಮಾದ ಮೂಲಕ ಹೀರೋ ಅಗಿ ಕಾಣಿಸಿಕೊಂಡಿದ್ದರು.  ಆದರೆ, ಈಗ ಅವರ ಕುಟುಂಬಕ್ಕೆ ರಿಯಲ್ ‘ಹೀರೋ’ ಆಗಮನವಾಗಿದೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಖುಷಿಯನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

Read More »

“P M ನರೇಂದ್ರ ಮೋದಿ” ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ ಏಪ್ರಿಲ್ 12ಕ್ಕೆ ಬಿಡುಗಡೆ.

    ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಬಯೋಪಿಕ್ ಚಿತ್ರಗಳೇ ಹೆಚ್ಚಾಗಿ ಮೂಡಿಬರುತ್ತಿದೆ. ಈ ನಡುವೆ ‘ಪಿಎಂ ನರೇಂದ್ರ ಮೋದಿ’ ಶೀರ್ಷಿಕೆಯ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ದೇಶಾದ್ಯಂತ ಜನರು ಈ ಚಿತ್ರದ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಮೇರಿ ಕೋಮ್ ಹಾಗೂ ಸರಬ್ಜಿತ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಒಮಂಗ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು,ಇದೊಂದು ವಿಶೇಷವಾದ ಸಿನಿಮಾ ಆಗಿದ್ದು, ನರೇಂದ್ರ ದಾಮೋದರ್ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, 2014 ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದೇಶದ ಪ್ರಧಾನಿಯಾಗುವವರೆಗಿನ ...

Read More »

ಸೈನಿಕರಿಗೊಂದು ಸಲಾಂ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಯುವಕರ ಪಡೆಯೊಂದು ತನ್ನ ದೇಶಾಭಿಮಾನವನ್ನು ದಿಲ್ ಹೈ ಇಂಡಿಯಾ ಎಂಬ ಗೀತೆಯ ಮೂಲಕ ಪ್ರಸ್ತುತಪಡಿಸಿದೆ.   ಶಿಕಾರಿಪುರ ತಾಲೂಕಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಗಳನ್ನ ನೀಡುವುದರ ಮೂಲಕ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಗೀತೆಯು ಪ್ರೇಮ್ ಸಾಯಿ ಅವರ ಕಂಠದಲ್ಲಿ  ಮೂಡಿಬಂದಿದೆ.  ಎಲ್ಲಾ ದೇಶ ಅಭಿಮಾನಿಗಳಿಗಾಗಿ  ಈ ಹಾಡನ್ನ ಅರ್ಪಿಸುವುದಾಗಿ ತಂಡದವರು ಸಂತಸದಿಂದ ತಿಳಿಸಿದ್ದಾರೆ.

Read More »

ಮಹಾನ್ ಕಲಾವಿದ ಲೋಕನಾಥ್ ಇನ್ನಿಲ್ಲ

  ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ಲೋಕನಾಥರು ಜನಿಸಿದ್ದು ಆಗಸ್ಟ್ 14, 1927ರಂದು. ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗದಲ್ಲಿ ಇಂದಿಗೂ ಅಜರಾಮರ. ಸಂಸ್ಕಾರ, ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ...

Read More »

ಕೆಜಿಎಫ್ ಹುಡುಗನ ಚಿನ್ನದ ರಾಕಿಂಗ್ ಕಥೆ..!!

“ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟರ್ ..ಅವನು ಒಬ್ಬನೇ ಬರೋನು ಮಾನ್ ಸ್ಟರ್ “..ಇದು ಕೆಜಿಎಫ್ ಚಿತ್ರದ ಸಂಭಾಷಣೆ. ಸಧ್ಯ ಈ ಡೈಲಾಗ್ ಅಕ್ಷರಶಃ ಸತ್ಯವಾಗಿದೆ.ಯಾಕಂದ್ರೆ ಇಷ್ಟು ದಿನ ಪರಭಾಷೆಗೂ ಮೀರಿದ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯಾವುದು ಬಂದಿಲ್ಲ ಅನ್ನುವವರಿಗೆ ಕೆಜಿಎಫ್ ಚಿತ್ರ ಇವೆಲ್ಲವನ್ನೂ ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡ್ತಿದೆ ..ಗಡಿಯಾಚೆಗೂ ದೊಡ್ಡ ಕ್ರೇಜ್ ಹುಟ್ಟುಹಾಕ್ತಿದೆ.ಈಗಾಗ್ಲೇ ಟ್ರೈಲರ್ ಮೂಲಕ ಎಲ್ಲರಲ್ಲಿ ನಿರೀಕ್ಷೆಯನ್ನ ಹೆಚ್ಚಿಸಿದ್ದ ಕೆಜಿಎಫ್ ಸಿನಿಮಾ ಕನ್ನಡ ಸಿನಿ ಮಾರುಕಟ್ಟೆಯನ್ನ ಹೆಚ್ಚಿಸುವುದರ ಜೊತೆಗೆ ಕನ್ನಡಿಗರು ಹೆಮ್ಮೆ ಪಡುವಂತಹ ಚಿತ್ರವಾಗಿ ನಿಂತಿದೆ.ಬರೋಬ್ಬರಿ ...

Read More »

ರಶ್ಮಿಕಾ ಮಂದಣ್ಣ ಫೋಟೋಸ್ ಫುಲ್ ವೈರಲ್…

ಕೊಡಗಿನ ಬೆಡಗಿ ರಶ್ಮಿಕಾಗೆ ಈಗ ಟಾಲಿವುಡ್ನಲ್ಲಿ ಎಲ್ಲಿಲ್ಲದ ಬೇಡಿಕೆ.. ಮೊದಲ ಸಿನಿಮಾ ಕಿರಿಕ್ ಪಾಟಿ೵ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಎರಡನೇ ಸಿನಿಮಾ ಮಾಡಿದ ಕೂಡಲೇ ತೆಲುಗಿನಲಿ ನಟಿಸಲು ಅವಕಾಶ ಸಿಕ್ಕಿತು. ಹೀಗಿರುವಾಗಲೇ ‘ಗೀತ ಗೋವಿಂದಂ’ ಸಿನಿಮಾ ತೆರೆ ಕಂಡು ನೂರು ಕೋಟಿಯ ಗಡಿ ದಾಟಿತು ನೋಡಿ, ಅಲ್ಲಿಗೆ ರಶ್ಮಿಕಾ ಲಕ್ ಸಂಪೂರ್ಣ ಬದಲಾಗಿತ್ತು. ಇದರಿಂದಾಗಿ ಈ ಬೆಡಗಿಗೆ ತೆಲುಗಿನಲ್ಲಿ ಅವಕಾಶಗಳ ಸುರಿಮಳೆಯೇ ಆಗ ತೊಡಗಿತ್ತು. ಆದರೆ ಇತ್ತೀಚೆಗೆ ತೆರೆಕಂಡ ‘ದೇವ್ದಾಸ್’ ಸಿನಿಮಾದ ನಟನೆಯನ್ನು ಜನ ಮೆಚ್ಚಲಿಲ್ಲ. ಆದರೂ ಅವರ ಇತ್ತೀಚೆಗಿನ ಹಾಟ್ ...

Read More »

ಬಣ್ಣದ ಬದುಕಿಗೆ ರಮ್ಯ Re-entry

ಸದ್ಯ ಕಾಂಗ್ರೇಸ್ ಪಕ್ಷದ ರಾಜಕೀಯದಲ್ಲಿ ಸಕ್ರಿಯರಾಗಿರುವ ರಮ್ಯಾ ಅವರು ಮತ್ತೆ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ರಮ್ಯ ತಮ್ಮ ರಾಜಕೀಯ ಬದುಕಿನಿಂದ ಮತ್ತೆ ಬಣ್ಣದ ಜಗತ್ತಿಗೆ ಜೀಗಿಯಲಿದ್ದಾರೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ. ದರ್ಶನ್ ಅಭಿನಯದ ಐತಿಹಾಸಿಕ ಮದಕರಿ ನಾಯಕ ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ. ದರ್ಶನ್ ಮತ್ತು ರಮ್ಯಾ 2006ರಲ್ಲಿ ತೆರೆ ಕಂಡಿದ್ದ ದತ್ತ ಚಿತ್ರದಲ್ಲಿ ಅಭಿನಯಿಸಿದ್ದರು. ಆ ನಂತರ ಈ ಇಬ್ಬರು ಒಟ್ಟಾಗಿ ಅಭಿನಯಿಸಿರಲಿಲ್ಲ. ಇದೀಗ ಐತಿಹಾಸಿಕ ಚಿತ್ರದ ಮೂಲಕ ರಮ್ಯಾ ಮತ್ತೆ ದರ್ಶನ್ ಜೊತೆ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Crime Hosanagara JDS K S Eshwarappa madhu bangarappa M P Election MP election News NSUI police Sagara Shikaripura Shimoga shimoga district Shivammoga Shivamoga Shivamogga Soraba SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಗಂದೂರು

Recent Comments