ಭಾರತ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಮಣಿರತ್ನಂ ಮತ್ತೆ ಕನ್ನಡ ಸಿನಿಮಾ ಮಾಡುತ್ತಾರಾ? ಈ ಪ್ರಶ್ನೆಗೆ ಈಗ ಸ್ವತಃ ಮಣಿರತ್ನಂ ಅವರ ಪತ್ನಿ, ನಟಿ ಸುಹಾಸಿನಿ ಉತ್ತರ ನೀಡಿದ್ದಾರೆ. ಮಣಿರತ್ನಂ ಮೊದಲು ಕನ್ನಡ ಚಿತ್ರದ ಮೂಲಕ ತಮ್ಮ ಸಿನಿಮಾ ಪ್ರಯಾಣ ಶುರು ಮಾಡಿದವರು. ‘ಪಲ್ಲವಿ ಅನು ಪಲ್ಲವಿ’ ಚಿತ್ರ ಮಣಿ ಅವರ ಚೊಚ್ಚಲ ಚಿತ್ರವಾಗಿತ್ತು. ಈ ಚಿತ್ರದ ವಿಷಯ ಹಾಗೂ ಕಥೆಯನ್ನ ಕನ್ನಡ ಪ್ರೇಕ್ಷಕರು ಮಾತ್ರ ಅರ್ಥ ಮಾಡಿಕೊಳಲು ಸಾಧ್ಯ ಎನ್ನುವುದು ಮಣಿ ಅವರಿಗೆ ಅರ್ಥ ಆಗಿತ್ತು. ಆ ಚಿತ್ರದ ನಂತರ ತಮಿಳು ಹಾಗೂ ಹಿಂದಿ ಸಿನಿಮಾ ಮಾಡಿದ ಮಣಿರತ್ನಂ ದೇಶಾದ್ಯಂತ ಹೆಸರು ಮಾಡಿದರು. ಅವುಗಳ ಬಳಿಕ ಇದೀಗ ಮತ್ತೆ ಮಣಿರತ್ನಂ ಕನ್ನಡ ಸಿನಿಮಾ ಮಾಡಲಿದ್ದಾರಂತೆ.
ಈ ಬಗ್ಗೆ ಅವರ ಪತ್ನಿ ನಟಿ ಸುಹಾಸಿನಿ ಮಾತಾನಾಡಿದ್ದಾರೆ. “ಮಣಿರತ್ನಂ ಅವರಿಗೆ ಮತ್ತೆ ಕನ್ನಡ ಸಿನಿಮಾ ಮಾಡುವ ಆಸೆ ಇದೆ. ಅವರಿಗೆ ಕನ್ನಡದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಕನ್ನಡ ಚಿತ್ರ ಮಾಡಿ ಎಂದು ಕೇಳುತ್ತಿರುತ್ತಾರೆ. ಮಣಿ ಅವರು ಇದಕ್ಕೆ ಒಪ್ಪಿದ್ದು ಅದು ಯಾವಾಗ ಎಂದು ತಿಳಿದಿಲ್ಲ” ಎಂದರು.
Recent Comments