ಮೊದಲು ಶ್ರೀರಾಮಸೇನೆ ಬಜರಂಗದಳದ ಮೇಲೆ ಬುಲ್ಡೋಜ ಮಾಡಬೇಕು…ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬಾರದು
Cnewstv.in / 25.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೊದಲು ಶ್ರೀರಾಮಸೇನೆ ಬಜರಂಗದಳದ ಮೇಲೆ ಬುಲ್ಡೋಜ ಮಾಡಬೇಕು…ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬಾರದು
ಶಿವಮೊಗ್ಗ : ಬೋವಿ ಸಮಾಜದ ಕಾರ್ಯಕ್ರಮಕ್ಕೆಂದು ಶಿವಮೊಗ್ಗಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು
ರಾಜ್ಯದಲ್ಲಿ ಬುಲ್ಡೋಜರ್ ಕಾನೂನು ವಿಚಾರ :
ಮೊದಲು ಶ್ರೀರಾಮಸೇನೆ, ಭಜರಂಗದಳ, ಶ್ರೀರಾಮಸೇನೆ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು..ಅವರಿಗೆ ಹೊಡೆದ್ರೇ ಎಲ್ಲವೂ ಸರಿಯಾಗುತ್ತೆ.. ಸಮಾಜವು ಸರಿಯಾಗುತ್ತೆ. ತಗೋಬಂದು ಇವರೆಲ್ಲರಿಗೂ ಮಾಡಲಿ ಎಂದ ಸಿದ್ದರಾಮಯ್ಯ.
ಪಿಎಸ್ಐ ನೇಮಕಾತಿ ಅಕ್ರಮ :
ಪಿಎಸ್ಐ ಪರೀಕ್ಷೆ ನಡೆದ ಕೇಂದ್ರ ಯಾರದ್ದು?? ಬಿಜೆಪಿಯವರು ಅವರ ತಪ್ಪಿನಿಂದ ಬಚಾವಾಗಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಬಾರದು. ಸಂಸ್ಥೆ ಬಿಜೆಪಿಯವರಿಗೆ ಸೇರಿದ್ದು, ಮಹಿಳಾ ಮೋರ್ಚಾದವರಿ. ಆಕೆಯ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ಆಕೆ ತಲೆ ಮರೆಸಿಕೊಂಡಿದ್ದಾಳೆ. ಅಂತಹ ಸಂಸ್ಥೆಯಲ್ಲಿ ಕಾಂಗ್ರೆಸ್ ನವರದ್ದು ನಡೀತದಾ…? ತಪ್ಪಿತಸ್ಥರಿಗೆ ಶಿಕ್ಷೆ ಅಗಬೇಕು ಎಂದರು.