Breaking News

ಕೆಸರು ಗದ್ದೆಯಂತ ರಸ್ತೆ – ನಾಟಿ ಮಾಡಿ ಪ್ರತಿಭಟಿಸಿದ ವಿದ್ಯಾರ್ಥಿಗಳು

ಕೆಸರು ಗದ್ದೆಯಂತ ರಸ್ತೆಯಿಂದ ಮುಕ್ತಿ ನೀಡಿ ಎಂದು ನಾಟಿ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

 

ಶಿವಮೊಗ್ಗ: ಮಳೆಗಾಲ ಬಂದರೆ ಸಾಕು ತಾಲೂಕಿನ ಕೋಣೆಹೊಸೂರು ಗ್ರಾಮದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂಜರಿಯುವ ಪರಿಸ್ಥಿತಿ ಇದೆ. ಕಾರಣ ಈ ಗ್ರಾಮದ ರಸ್ತೆಯ ಅವ್ಯವಸ್ಥೆ.

ಕೋಣೆ ಹೊಸೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಜನರು ಮುಖ್ಯ ರಸ್ತೆಗೆ ಬಂದು ಅಲ್ಲಿಂದ ತುಪ್ಪೂರು ಗ್ರಾಮದ ಶಾಲೆಗೆ, ಅಂಗಡಿಗೆ ಕೆಸರು ಮಯವಾದ ರಸ್ತೆಯಲ್ಲೇ ಸಾಗಬೇಕು. ಮಳೆಗಾಲದಲ್ಲಿ ಗ್ರಾಮದ ರಸ್ತೆಯು ಕಳೆದ 10 ವರ್ಷಗಳಿಂದಲೂ ಕೆಸರಿನಿಂದ ತುಂಬಿಕೊಳ್ಳುತ್ತಿದೆೆ. ಈ ರಸ್ತೆಯಲ್ಲಿ ಹುಷಾರಾಗಿ ನಡೆದುಕೊಂಡು, ಇಲ್ಲವೇ ಟ್ರಾಕ್ಟರ್​, ಕಾರಿನಂತಹ ದೊಡ್ಡ ವಾಹನದಲ್ಲಿ ಓಡಾಡಬೇಕು. ಜನರು ಬೈಕ್​ನಲ್ಲಿ ಹೋಗಲು ಮುಂದಾದರೆ ಕೆಸರಿನಲ್ಲಿ ಚಕ್ರ ಸಿಲುಕಿ ಬಿದ್ದು ಹೋಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಬೇಗ ಹೋಗಲು ಯತ್ನಿಸಿ, ಜಾರಿ ಬಿದ್ದು ಬಟ್ಟೆಯೆಲ್ಲಾ ಕೆಸರು ಮಾಡಿಕೊಳ್ಳುತ್ತಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 100 ಮನೆಗಳಿವೆ. ಈ ಗ್ರಾಮಕ್ಕೆ ರಸ್ತೆಬೇಕೆಂದು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಓಟು ಪಡೆದು ಹೋಗುವ ಜನಪ್ರತಿನಿಧಿಗಳು ಇತ್ತ ತಿರುಗಿಯು ನೋಡಲ್ಲ. ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾಗಿದೆ. ಕೋಣೆಹೂಸೂರು ಗ್ರಾಮವು ತುಪ್ಪೂರು ಗ್ರಾಮ ಪಂಚಾಯಿತಿಗೆ ಸೇರುತ್ತದೆ‌. ಈ ಗ್ರಾಮದಿಂದ ಇಬ್ಬರು ಜನಪ್ರತಿನಿಧಿಗಳು ಇದ್ದರು ಸಹ ಸುಮಾರು ಎರಡು ಕಿಮೀ ರಸ್ತೆ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು. ಇದರಿಂದ ಇಂದು ಗ್ರಾಮಸ್ಥರು ಶಾಲಾ ಮಕ್ಕಳ ಜೊತೆ ಸೇರಿ ರಸ್ತೆಯು ಕೆಸರು ಗದ್ದೆಯಾಗಿದೆ ಎಂದು ಅಣಕದ ರೀತಿ ರಸ್ತೆಯಲ್ಲಿಯೇ ನಾಟಿ ಮಾಡಿದ್ದಾರೆ.

Leave a Reply

Your email address will not be published. Required fields are marked *

*