ಕನ್ನಡದ KGF ಚಿತ್ರದ ನಂತರ ಅಮರಾವತಿ ಅನ್ನುವ ಕಾಲ್ಪನಿಕ ಪ್ರದೇಶದ ಒಳಗೆ ಪ್ರೇಕ್ಷರನ್ನ ಕರೆದುಕೊಂಡು ಹೋಗುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಇಡೀ ಕರ್ನಾಟಕದಾದ್ಯಂತ ಸುಮಾರು 500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಂಡಿದೆ. ಇನ್ನು ಈ ಚಿತ್ರ ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಂಚ ಭಾಷೆಗಳಲ್ಲಿ ತೆರೆಕಂಡಿದ್ದು ಈಗ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ರಾಜ್ಯದಲ್ಲಿ ಬಹಳ ಒಳ್ಳೆಯ ಪ್ರಶಂಸೆ ಸಿಕ್ಕಿದ್ದು ಜನರು ಚಿತ್ರವನ್ನ ಹಾಡಿ ಹೊಗಳಿದ್ದಾರೆ, ಇನ್ನು ರಕ್ಷಿತ್ ಶೆಟ್ಟಿ ಅವರ ಮೂರೂ ವರ್ಷದ ಪರಿಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲ್ಲ..
ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರ ಕನ್ನಡ ಕೆಲವು ಚಿತ್ರಗಳ ದಾಖಲೆಗಳನ್ನ ಮುರಿದಿದ್ದು ಹೊಸ ದಾಖಲೆಯನ್ನ ಸೃಷ್ಟಿ ಮಾಡುತ್ತಿದೆ, ಹಾಗಾದರೆ ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಅವನೇ ಶ್ರೀಮನ್ನಾರಾಯಣ ಚಿತ್ರ ರಕ್ಷಿತ್ ಶೆಟ್ಟಿ ಅವರ ಸತತ ಮೂರೂ ವರ್ಷಗಳ ಪರಿಶ್ರಮದಿಂದ ತಯಾರಾದ ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕನ್ನಡ ಉಳಿದ ಚಿತ್ರಗಳಿಗಿಂತ ವಿಭಿನ್ನವಾಗಿ ತೆರೆಕಂಡಿರುವ ಅವನೇ ಶ್ರೀಮನ್ನಾರಾಯಣ ಚಿತ್ರವನ್ನ ಸಿನಿ ಪ್ರಿಯರು ಮೂರೂ ಗಂಟೆ ಆರು ನಿಮಿಷಗಳ ವೀಕ್ಷಣೆಯನ್ನ ಮಾಡಿದ್ದಾರೆ.
ಇನ್ನು ಚಿತ್ರವನ್ನ ನೋಡಿದ ಕನ್ನಡ ಮತ್ತು ಇತರೆ ಚಿತ್ರರಂಗದ ನಟರು ಮತ್ತು ಗಣ್ಯರು ಚಿತ್ರವನ್ನ ಹಾಡಿ ಹೊಗಳಿದ್ದಾರೆ, ಇನ್ನು ಚಿತ್ರ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದ್ದು ಬಾಕ್ಸ್ ಆಫೀಸನ್ನ ಕೂಡ ಕೊಳ್ಳೆ ಹೊಡೆದಿದೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರ ಸ್ವಲ್ಪ ದೊಡ್ಡದಿದ್ದರೂ ಕೂಡ ಸಿನಿ ಪ್ರಿಯರನ್ನ ಹಿಡಿದಿಟ್ಟುಕೊಂಡಿದೆ ಎಂದು ನಟ ರವಿಚಂದ್ರನ್ ಅವರು ಹೇಳಿದ್ದಾರೆ ಮತ್ತು ನಟ ಶಿವಣ್ಣ ಕೂಡ ಅವನೇ ಶ್ರೀಮನ್ನಾರಾಯಣ ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಸುಮಾರು 12 ರಿಂದ 15 ಕೋಟಿ ರೂಪಾಯಿಯನ್ನ ಸಂಪಾಧನೆ ಮಾಡಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ..
ಇನ್ನು ಚಿತ್ರ ಕೇವಲ ಕನ್ನಡ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದು ಉಳಿದ ಭಾಷೆಗಳಲ್ಲಿ ಆದಷ್ಟು ಬೇಗ ಬಿಡುಗಡೆ ಆಗಲಿದ್ದು ಬಾಕ್ಸ್ ಆಫೀಸನ್ನ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ, ಇನ್ನು ಬಾಕ್ಸ್ ಆಫೀಸ್ ನಲ್ಲಿ ಮೊದಲ ಸ್ಥಾನವನ್ನ KGF ಚಿತ್ರ ಪಡೆದಿದೆ ಮತ್ತು ಎರಡನೆಯ ಸ್ಥಾನವನ್ನ ಯಜಮಾನ ಚಿತ್ರ ಪಡೆದರೆ ಮೂರನೇ ಸ್ಥಾನವನ್ನ ಅವನೇ ಶ್ರೀಮನ್ನಾರಾಯಣ ಚಿತ್ರ ಮೂರನೆಯದ ಸ್ಥಾನದಲ್ಲಿ ನಿಂತಿದೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರವನ್ನ ನೋಡಿದ ಸಿನಿ ಪ್ರಿಯರು ಚಿತ್ರ ನೂರು ದಿನ ಓದುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ ಮತ್ತು ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಳನ್ನ ಸ್ಥಾಪಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.
Recent Comments