ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಬಳಿಯ ಶರಾವತಿಯ ಹಿನ್ನೀರಿನಲ್ಲಿಎರಡು ಲಾಂಚ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ 500 ಕ್ಕುಹ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಶರಾವತಿ-1 ಹಾಗೂ ಶರಾವತಿ-2 ಲಾಂಚ್ ಗಳ ನಡುವೆ ಅಂಬಾರಗೋಡ್ಲು ದಡದ ಸಮೀಪ ಡಿಕ್ಕಿ ಸಂಭವಿಸಿದೆ. ಲಾಂಚ್ ಚಾಲಕರುಗಳ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಲಾಂಚ್ ಗಳ ಡಿಕ್ಕಿಯಲ್ಲಿ ಎರಡೂ ಲಾಂಚ್ ಗಳೂ ಜಖಂಗೊಂಡಿವೆ. ಆದರೆ ಸಂಚಾರ ನಡೆಸಲು ಯಾವುದೇ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ಬಳಿಕವೂ ಮತ್ತೆ ಸಂಚಾರ ಆರಂಭಿಸಿವೆ.

C News TV Kannada News Online in cnewstv