Cnewstv / 29.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಚರಂಡಿ ಸ್ಯ್ಲಾಬ್ ಕುಸಿದು, ಮೃತಪಟ್ಟ ವ್ಯಕ್ತಿ..
ಶಿವಮೊಗ್ಗ : ಚರಂಡಿಗೆ ಹಾಕಿದ್ದ ಮೇಲ್ಭಾಗದ ಸ್ಲಾಬ್ ಕುಸಿದು ಚರಂಡಿಯ ಒಳಗೆ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಶಿವಮೊಗ್ಗದ ವಿನೋಬನಗರದ ವೀರಣ್ಣ ಲೇಔಟ್ ನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಬೊಮ್ಮನಕಟ್ಟೆಯ ಮುತ್ತಪ್ಪ (45) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೂತ್ರ ವಿಸರ್ಜನೆಗೆಂದು ಚರಂಡಿಯ ಸ್ಲ್ಯಾಬ್ ಮೇಲೆ ನಿಂತಿದ್ದಾಗ, ಸ್ಲಾಬ್ ಏಕಾಏಕಿ ಕುಸಿದು ಬಿದ್ದಿದ್ದು, ಮುತ್ತಣ್ಣ ಚರಂಡಿ ಒಳಗೆ ಬಿದ್ದಿದ್ದಾರೆ ಅವರ ಮೇಲು ಕೂಡ ಸ್ಲಾಬ್ ಬಿದ್ದಿದೆ ಇದರಿಂದ ಸ್ಥಳದಲ್ಲೇ ಮುತ್ತಣ್ಣ ಮೃತಪಟ್ಟಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
#Slab #Death #smartcityshivamogga #Shivamogga #damage #persondeath #Smartcity
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
C News TV Kannada News Online in cnewstv