Cnewstv / 06.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸ್ವದೇಶಿ ಮೇಳ ಉದ್ಘಾಟನಾ ಸಮಾರಂಭ
ಶಿವಮೊಗ್ಗ : ನಗರದ ಫ್ರೀಡಂ ಪಾರ್ಕಿನಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಇಂದಿನಿಂದ ಐದು ದಿನಗಳ ಕಾಲ ಬೃಹತ್ ಸ್ವದೇಶಿ ಮೇಳ ಆಯೋಜನೆ ಮಾಡಲಾಗಿದೆ. ಇಂದು ಸಂಜೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಿರಿಗಿರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದ್ದರು.
ಸ್ವದೇಶಿ ಮೇಳದಲ್ಲಿ 200 ಕ್ಕೂ ಹೆಚ್ಚು ಸ್ಟಾಲ್ ಗಳನ್ನ ಹಾಕಲಾಗಿದ್ದು, ಸ್ವದೇಶ ಉತ್ಪನ್ನಗಳು, ಖಾದಿ ಉತ್ಪನ್ನಗಳು, ಆರೋಗ್ಯಕರ ತಿನ್ನಿಸುಗಳು, ಮಕ್ಕಳ ಆಟಿಕೆಗಳು,ಕೃಷಿ ಉತ್ಪನ್ನಗಳು ಲಭ್ಯವಿದೆ. ಹಾಗೂ ಮನೋರಂಜನೆಗಾಗಿ ಜೈನ್ ವಿಲ್, ಕೊಲಂಬಸ್ ಸೇರಿದಂತೆ ವಿವಿಧ ಆಟಿಕೆಗಳನ್ನು ಅಳವಡಿಸಲಾಗಿದೆ.
#ಸಿರಿಗಿರೆಮಠದಡಾ.ಶಿವಮೂರ್ತಿಶಿವಾಚಾರ್ಯ #SwadeshiMela #SwadeshiJagranmanch #BSY #B.Y Raghavendra #BSYediyurappa #ಸ್ವದೇಶಿ ಮೇಳ 2023.
C News TV Kannada News Online in cnewstv