ದರ್ಶನ್‌ ವಿವಾದ : ಅಭಿಮಾನಿಗೆ ಕಿಚ್ಚನಿಂದ ಖಡಕ್ ಉತ್ತರ

Cnewstv / 21.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ದರ್ಶನ್‌ ವಿವಾದ : ಅಭಿಮಾನಿಗೆ ಕಿಚ್ಚನಿಂದ ಖಡಕ್ ಉತ್ತರ

ಬೆಂಗಳೂರು : ಇತ್ತೀಚೆಗೆ ನಟ ದರ್ಶನ್‌ ಅವರ ಮೇಲಾದ ಘಟನೆಗೆ ಕಿಚ್ಚ ಸುದೀಪ್‌ ಅವರು ಟ್ವಿಟರ್‌ ನಲ್ಲಿ ಪ್ರತಿಕ್ರಿಯಿಸಿ, ಆಕ್ರೋಶ ಎಲ್ಲದಕ್ಕೂ ಉತ್ತರವಲ್ಲ. ಈ ರೀತಿ ಯಾರೊಂದಿಗೂ ಆಗಬಾರದು. ಅಪ್ಪು – ದರ್ಶನ್ ಇಬ್ಬರೂ ನನಗೆ ಆತ್ಮೀಯರು ಎಂದು ಹೇಳಿ ಅಭಿಮಾನಿಗಳ ಬಗ್ಗೆಯೂ ಹೇಳಿದ್ದರು.

ಇದು ನಿಜಕ್ಕೂ ನನಗೆ ನೋವುಂಟು ಮಾಡಿದೆ ಎಂದು ಸುಮಾರು 3 ಪುಟಗಳಷ್ಟು ಸುದೀರ್ಘ ಪತ್ರದಲ್ಲಿ ಸುದೀಪ್‌ ಬೇಸರ ತೋಡಿಕೊಂಡಿದ್ದಾರೆ. ಸುದೀಪ್‌ ಈ ಟ್ವೀಟ್‌ಗೆ ಅಂತರ್ಜಾಲ ಜಗತ್ತಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

https://cnewstv.in/?p=11712

ಕಿಚ್ಚ ಒಬ್ಬ ಕಲಾವಿದನಾಗಿ ಇನ್ನಬ್ಬ ಕಲಾವಿದನ ಜೊತೆ ನಿಂತು, ಎರಡೂ ಕಲಾವಿದರ ಅಭಿಮಾನಿಗಳ ಬಗ್ಗೆ ಮಾತಾನಾಡಿದ ವಿಚಾರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಟ್ವಿಟರ್‌ ನಲ್ಲಿ ಕಿಚ್ಚನ ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಕ್ಕೆ ಸುದೀಪ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರ ಕಿಚ್ಚ ಸುದೀಪ್‌ ಎನ್ನುವ ಫ್ಯಾನ್ಸ್‌ ಪೇಜ್‌ ವೊಂದು ನಿನ್ನೆ ಸುದೀಪ್‌ ಅವರು ಮಾಡಿದ ಟ್ವೀಟ್‌ ಗೆ ಸಂಬಂಧಿಸಿ “ ನಾಯಿ ಬಾಲ ಎಂದಿಗೂ ನೇರವಾಗಲ್ಲ. ನಾನು ಬಾಸ್‌ ಎಂದು ಹೇಳುವಷ್ಟು ಅರ್ಹತೆ ನನಗಿಲ್ಲ. ಒಂದು ಚಪ್ಪಾಳೆಗೆ ಎರಡೂ ಕೈಗಳು ಬೇಕು, ಎರಡೂ ಕೈಗಳಿಲ್ಲದೆ ಚಪ್ಪಾಳೆ ಸಾಧ್ಯವಾಗಲ್ಲ. ದಯವಿಟ್ಟು ನೀವು ನಿಮ್ಮಷ್ಟಕ್ಕೆ ಇದ್ದು, ಅಭಿಮಾನಿಗಳ ಬಗ್ಗೆ ಯೋಚಿಸಿ. ಕೆಎಫ್‌ ಐ ನಲ್ಲಿ ಯಾರೂ ನಿಮ್ಮ ಜೊತೆ ಇರಲ್ಲ. ಅಭಿಮಾನಿಗಳನ್ನು ಬಿಟ್ಟು. ಒಳ್ಳೆಯತನ ಗೆಲ್ಲುತ್ತದೆ ಕಿಚ್ಚ ಸುದೀಪ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments