Breaking News

ಶಿವಮೊಗ್ಗ

ಹೆಂಡತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ.

Cnewstv.in / 07.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹೆಂಡತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ. ಶಿವಮೊಗ್ಗ : ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ ಆದರೆ ಇಲ್ಲಿ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.‌ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯಾಂಕಾ ಲೇಜೌಟ್ ನಲ್ಲಿ ದಿನೇಶ ಮತ್ತು ಮಂಜುಳಾ ನಡುವೆ ಗಲಾಟೆಯಾಗಿದ್ದು, ಈ ಗಲಾಟೆಯೇ ಕೊಲೆಗೆ ಕಾರಣ ಎಂದು ದಿನೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರು ದಿನೇಶ್ ತನ್ನ ...

Read More »

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ.

Cnewstv.in / 06.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ. ಶಿವಮೊಗ್ಗ : ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಆದೇಶಿಸಿದ್ದಾರೆ. ಮೆರವಣಿಗೆಯು ಅಂದು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್‍ಪಿಎಂ ಮುಖ್ಯ ...

Read More »

ರಾಜಧಾನಿಯಲ್ಲಿ ಹೊಳೆಯಂತಾದ ರಸ್ತೆಗಳು, ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ತೇಲುತ್ತಿರುವ ಐಷಾರಾಮಿ ಕಾರುಗಳು.

Cnewstv.in / 06.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಜಧಾನಿಯಲ್ಲಿ ಹೊಳೆಯಂಥ ರಸ್ತೆಗಳು, ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ತೇಲುತ್ತಿರುವ ಐಷಾರಾಮಿ ಕಾರುಗಳು. ಬೆಂಗಳೂರು : ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ರಾಜಧಾನಿಯ ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದ್ದು ಹೊಳೆಯಂತಾಗಿದೆ. ಎಲ್ಲಿ ನೋಡಿದರೂ ನೀರು, ಜನರು ಈಜಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಅಪಾರ್ಟ್ಮೆಂಟ್ ಗಳ ಕೆಳಮಹಡಿಯ ಮನೆಗಳಿಗೆ ನೀರು ನುಗ್ಗಿದೆ. ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಕೋರಮಂಗಲ, ...

Read More »

ಸಿಚುವಾನ್ ನಲ್ಲಿ ಭಾರಿ ಭೂಕಂಪ. ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆ.

Cnewstv.in / 06.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಿಚುವಾನ್ ನಲ್ಲಿ ಭಾರಿ ಭೂಕಂಪ. ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆ. ನವದೆಹಲಿ : ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಚೀನಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ನೈಋತ್ಯ ಚೀನಾದಲ್ಲಿ ನೆನ್ನೆ ಪ್ರಬಲ ಭೂಕಂಪವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿದೆ, 50 ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:25ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ. ಸಿಚುವಾನ್ ರಾಜಧಾನಿ ಚೆಂಗ್ಡುವಿನಿಂದ 180 ...

Read More »

ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಹೈಕೋರ್ಟ್ ನಿಂದ ತಡೆ..?!

Cnewstv.in / 06.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಹೈಕೋರ್ಟ್ ನಿಂದ ತಡೆ..?! ಶಿವಮೊಗ್ಗ : ಮಹಾನಗರ ಪಾಲಿಕೆಯ ಮೇಯರ್ – ಉಪಮೇಯರ್ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.     ಸೆ.13ರಂದು ನಿಗದಿಯಾಗಿದ್ದ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದ್ದ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ. ...

Read More »

ಹಿಂದೂಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಫೋಟೋ ವೈರಲ್.

Cnewstv.in / 05.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದೂಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಫೋಟೋ ವೈರಲ್. ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಂಗವಾಗಿ ಗಾಂಧಿಬಜಾರ್ ಮುಂಭಾಗ ನಿರ್ಮಾಣ ಮಾಡಿರುವ ಮಹಾದ್ವಾರದ ಫೋಟೋ ವೈರಲ್ ಆಗಿದೆ. ಈ ಹಿಂದೆ ನಿರ್ಮಾಣ ಮಾಡಿದ್ದ ಅಯೋದ್ಯ ರಾಮ ಮಂದಿರ ಹಾಗೂ ಸಿಂಹಾಸನದ ಮೇಲೆ ಕುಳಿಸಿದ ಛತ್ರಪತಿ ಶಿವಾಜಿ ಮೂರ್ತಿ ಸಖತ್ ಸದ್ದು ಮಾಡಿದ್ದು ಇದೀಗ ಅದರಂತೆಯೇ ಮಹಾಭಾರತದ ಶ್ರೀಕೃಷ್ಣ ಹಾಗೂ ಅರ್ಜುನನ ಮೂರ್ತಿ‌ ನಿರ್ಮಾಣ ಹಂತದಲ್ಲಿಯೇ ವೈರಲ್ ಆಗಿದೆ.‌ಇನ್ನು ...

Read More »

ಚಿರತೆ ಕಾರ್ಯಾಚರಣೆಗೆ ವಿಫಲ, ಬರಿಗೈಯಲ್ಲಿ ಹಿಂತಿರುಗಿದ್ದ ಅರಣ್ಯ ಇಲಾಖೆ.

Cnewstv.in / 05.09.2022 / ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಚಿರತೆ ಕಾರ್ಯಾಚರಣೆಗೆ ವಿಫಲ, ಬರಿಗೈಯಲ್ಲಿ ಹಿಂತಿರುಗಿದ್ದ ಅರಣ್ಯ ಇಲಾಖೆ. ಬೆಳಗಾವಿ : ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಜನರ ಚಿಂತೆಗೆ ಕಾರಣವಾದ ಚಿರತೆ ಕೊನೆಗೂ ಸಿಗಲಿಲ್ಲ. ಅರಣ್ಯ ಇಲಾಖೆ ಬರಿಗೈಯಲ್ಲಿ ಹಿಂದಿರುಗಿದೆ. ಬೆಳಗಾವಿ ಗಾಲ್ಫ್ ಕೋರ್ಸ್ ಪೊದೆಯೊಳಗೆ ಅಡಗಿದ್ದ ಚಿರತೆಯನ್ನು ಹುಡುಕಲು ಅರಣ್ಯ ಇಲಾಖೆಯ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು ಆದರೆ ಕಾರ್ಯಾಚರಣೆ ವಿಫಲವಾಗಿದೆ. ಆಗಸ್ಟ್ 5ರಂದು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ...

Read More »

“ಯೆಲ್ಲೋ ಅಲರ್ಟ್” ಇನ್ನು ನಾಲ್ಕು ದಿನ ಭಾರೀ ಮಳೆ ಸಾಧ್ಯತೆ.

Cnewstv.in / 05.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. “ಯೆಲ್ಲೋ ಅಲರ್ಟ್” ಇನ್ನು ನಾಲ್ಕು ದಿನ ಭಾರೀ ಮಳೆ ಸಾಧ್ಯತೆ. ಬೆಂಗಳೂರು : ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮುಂಜಾನೆಯಿಂದಲೇ ವರುಣನ ಬಿಡುವು ನೀಡದೆ ಅಬ್ಬರಿಸುತ್ತಿದೆ. ಮೋಡ ಕವಿದ ವಾತಾವರಣವಿದೆ. ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.‌ ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ ...

Read More »

ಜಲಾವೃತವಾದ ಜೈಲ್ ರಸ್ತೆ, ಹೊಸಮನೆಯಲ್ಲಿ ನೀರೋ ನೀರು..

Cnewstv.in / 03.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜಲಾವೃತವಾದ ಜೈಲ್ ರಸ್ತೆ, ಹೊಸಮನೆಯಲ್ಲಿ ನೀರೋ ನೀರು.. ಶಿವಮೊಗ್ಗ : ಇಂದು ಸಂಜೆ ಸುರಿದ ಮಳೆ ನಗರದಲ್ಲಿ ಭಾರಿ ಅಂತರವನ್ನೇ ಸೃಷ್ಟಿಸಿದ್ದು, ಜೈಲ್ ರಸ್ತೆ ಕೆರೆಯತಾಗಿದ್ದು ಹೊಸಮನೆ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನೀರು ನಿಂತಿದೆ. ಇನ್ನು ಹೊಸಮನೆಯ ಅನೇಕ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ...

Read More »

ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಾಗಾರ.

Cnewstv.in / 03.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಾಗಾರ. ಶಿವಮೊಗ್ಗ : ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಗುರುತಿನಚೀಟಿಗೆ(ಎಪಿಕ್ ಕಾರ್ಡ್) ನಮೂನೆ-6ಬಿ ಮೂಲಕ ಜೋಡಿಸುವ ಕುರಿತು ದಿನಾಂಕ: 04-09-2022 ಮತ್ತು 18-09-2022 ರ ಭಾನುವಾರಗಳಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿಶೇಷ ಕಾರ್ಯಾಗಾರ ನಡೆಯಲಿದೆ. ಸದರಿ ದಿನಗಳಂದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಈ ವಿಶೇಷ ಕಾರ್ಯಗಾರದಲ್ಲಿ ಹಾಜರಿದ್ದು, ಮತದಾರರು ಹಾಜರುಪಡಿಸುವ ಆಧಾರ್ ಸಂಖ್ಯೆಗಳಿಗೆ ಅವರ ಗುರುತಿನ ...

Read More »