Breaking News

ಸಚಿವರೇ ಸಿಮ್ಸ್‌ಗೆ ಹೋಗದಿದ್ದರೆ ಗತಿ ಏನು?: ಮಾಜಿ ಶಾಸಕ ಕೆಬಿಪಿ ಪ್ರಶ್ನೆ

ಶಿವಮೊಗ್ಗ: ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರು ಸಿಮ್ಸ್ ನಿರ್ದೇಶಕ ಡಾ. ಲೇಪಾಕ್ಷಿ ಅವರನ್ನು ನಿಂದಿಸಿರುವುದು ಸರಿ ಅಲ್ಲ ಎಂದು ಮಾಜಿ ಸಚಿವ ಕೆ.ಬಿ. ಪ್ರಸನ್ನ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈಶ್ವರಪ್ಪ ಅವರು ಡಾ. ಲೇಪಾಕ್ಷಿ ಅವರು ಇರುವ ವರೆಗೂ ಸಿಮ್ಸ್‌ಗೆ ಕಾಲಿಡುವುದಿಲ್ಲ ಎನ್ನುತ್ತಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ನಡೆದುಕೊಳ್ಳುವ ರೀತಿಯೇ? ಅವರು ಆಸ್ಪತ್ರೆಗೆ ಕಾಲಿಡದಿದ್ದರೆ ಅಲ್ಲಿಯ ಅವ್ಯವಸ್ಥೆಗಳನ್ನು ಸರಿ ಮಾಡುವವರು ಯಾರು? ರೋಗಿಗಳಿಗೆ ತೊಂದರೆ ಆದರೆ ಅದರ ಜವಾಬ್ದಾರಿ ಯಾರದು ಎಂದಿದ್ದಾರೆ.
ಅಧಿಕಾರಿಯೊಬ್ಬರನ್ನು ಬಹಿರಂಗವಾಗಿಯೇ ಎಲ್ಲರ ಎದುರಿಗೆ ನಿಂದಿಸಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೆ ಗೌರವ ಕೊಡುವ, ಅವರಿಂದ ಜನೋಪಯೋಗಿ ಕೆಲಸ ಮಾಡಿಸುವ ವಿಧಾನವೇ ಇದು ಎಂದು ಪ್ರಶ್ನಿಸಿದ್ದಾರೆ‌.
ನಿನ್ನೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾಗ ಫೋನ್ ಕರೆಯೊಂದಕ್ಕೆ ಪ್ರತಿಕ್ರಿಯಿಸಿ, ಡಾ. ಲೇಪಾಕ್ಷಿ ಅವರು ವರ್ಗಾವಣೆ ಆಗುವ ವರೆಗೂ ಸಿಮ್ಸ್‌ಗೆ ಕಾಲಿಡುವುದಿಲ್ಲ ಎಂದಿದ್ದರು.

Leave a Reply

Your email address will not be published. Required fields are marked *

*