ಶಿವಮೊಗ್ಗ: ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರು ಸಿಮ್ಸ್ ನಿರ್ದೇಶಕ ಡಾ. ಲೇಪಾಕ್ಷಿ ಅವರನ್ನು ನಿಂದಿಸಿರುವುದು ಸರಿ ಅಲ್ಲ ಎಂದು ಮಾಜಿ ಸಚಿವ ಕೆ.ಬಿ. ಪ್ರಸನ್ನ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈಶ್ವರಪ್ಪ ಅವರು ಡಾ. ಲೇಪಾಕ್ಷಿ ಅವರು ಇರುವ ವರೆಗೂ ಸಿಮ್ಸ್ಗೆ ಕಾಲಿಡುವುದಿಲ್ಲ ಎನ್ನುತ್ತಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ನಡೆದುಕೊಳ್ಳುವ ರೀತಿಯೇ? ಅವರು ಆಸ್ಪತ್ರೆಗೆ ಕಾಲಿಡದಿದ್ದರೆ ಅಲ್ಲಿಯ ಅವ್ಯವಸ್ಥೆಗಳನ್ನು ಸರಿ ಮಾಡುವವರು ಯಾರು? ರೋಗಿಗಳಿಗೆ ತೊಂದರೆ ಆದರೆ ಅದರ ಜವಾಬ್ದಾರಿ ಯಾರದು ಎಂದಿದ್ದಾರೆ.
ಅಧಿಕಾರಿಯೊಬ್ಬರನ್ನು ಬಹಿರಂಗವಾಗಿಯೇ ಎಲ್ಲರ ಎದುರಿಗೆ ನಿಂದಿಸಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೆ ಗೌರವ ಕೊಡುವ, ಅವರಿಂದ ಜನೋಪಯೋಗಿ ಕೆಲಸ ಮಾಡಿಸುವ ವಿಧಾನವೇ ಇದು ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾಗ ಫೋನ್ ಕರೆಯೊಂದಕ್ಕೆ ಪ್ರತಿಕ್ರಿಯಿಸಿ, ಡಾ. ಲೇಪಾಕ್ಷಿ ಅವರು ವರ್ಗಾವಣೆ ಆಗುವ ವರೆಗೂ ಸಿಮ್ಸ್ಗೆ ಕಾಲಿಡುವುದಿಲ್ಲ ಎಂದಿದ್ದರು.
- ಮಿಡಟೌನ್ ರೋಟರಿಗೆ ಐತಿಹಾಸಿಕ ಸಮಗ್ರ ಪ್ರಶಸ್ತಿ – ಹರ್ಷ ಕಾಮತ್ ...
- ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ನಾಪತ್ತೆ.. ...
- ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ. ...
- ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ...
- ಏಪ್ರಿಲ್ ನಿಂದ ಸೆಪ್ಟೆಂಬರ್-2025 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆಯಡಿ 1,82,000 ಜನರಿಗೆ ದಂಡ : ವಿ.ಎಸ್. ಉಗ್ರಪ್ಪ ...
- ಜನರೇ ಮೆಚ್ಚಿದ ‘ಬಂಗಾರ’ದ ಮನುಷ್ಯ…… ಬಡವರ ಜೀವನಕ್ಕೆ ಆಧಾರವಾದ ಕನಸುಗಾರ… ...
- ಎನ್ಇಎಸ್ ಸಿಬ್ಬಂದಿಗಳಿಗೆ “ಆಡಳಿತ ನಿರ್ವಹಣೆ – ಕೌಶಲ್ಯತೆ ಕಾರ್ಯಾಗಾರ” ...
- ಚಿಕ್ಕಬಳ್ಳಾಪುರ ರೈತರಿಗೆ ಅನ್ಯಾಯ, ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪ ಖಂಡನಿಯ. ...
- ಅ.15 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ. ...
- ಅ.15 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ. ...
C News TV Kannada News Online in cnewstv