ಸಾಗರದಿಂದ ಹೊಳೆಬಾಗಿಲ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಶರಾವತಿ ನೀರಿಗೆ ಇಳಿದಿದೆ. ಬಸ್ಸಿನಲ್ಲಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಜೆಸಿಬಿ ಬಳಸಿ ಬಸ್ಸನ್ನು ಮೇಲೆತ್ತಲಾಯಿತು.
ಹೊಳಬಾಗಿಲಿನಲ್ಲಿ ಲಾಂಚ್ ನಿಲ್ಲಿಸುವ ಜಾಗದ ಇಳಿಜಾರಿನಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 35 ರಿಂದ 40 ಜನ ಪ್ರಯಾಣಿಕರಿದ್ದರು ಆದರೆ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಬಾರಿ ಅನಾಹುತ ತಪ್ಪಿದೆ.