ಇಂದು ಸಂಜೆ ಗಾಂಧಿ ಪಾರ್ಕ್ನಲ್ಲಿ ಅಟವಾಡಲು ಹೋಗಿದ್ದ ಮಕ್ಕಳು ಮರಳಿ ಹೋಗಿದ್ದು ಮನೆಗಲ್ಲ ಬದಲಾಗಿ ಆಸ್ಪತ್ರೆಗೆ. ಗಾಂಧಿ ಪಾರ್ಕ್ ನಲ್ಲಿ ಇರುವ ಮಕ್ಕಳ ಅಟದ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿದ್ದು ಅಟವಾಡುತ್ತಿದ್ದ ರಾಜು, ಮೋಹನ್, ಸಂಕೇತ, ಸತೀಶ್ ಕುಮಾರ್ ಎಂಬ 4 ಮಕ್ಕಳಿಗೆ ಗಾಯಗಳಾಗಿವೆ. ತುಟಿ, ತಲೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆಯೇ ಮಕ್ಕಳ ಅಟದ ಸಾಮಾಗ್ರಿಗಳು ಹಾಳಾಗಿದೆ ಎಂದು ಪೋಷಕರು ತಿಳಿಸಿದ್ದರು ಕೂಡ ಯಾವುದೇ ಕ್ರಮವನ್ನು ಪಾಲಿಕೆ ಅಥವಾ ಅಧಿಕಾರಿಗಳು ತೆಗೆದುಕೊಂಡಿಲ್ಲ. ಈ ಘಟನೆಯ ನಂತರವಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಎಚ್ಚೆತುಕೊಂಡು ಪಾರ್ಕ್ ಕಡೆ ಗಮನ ಹರಿಸಲಿ ಎಂಬುದು CNEWSTV.in ಅಶಯ.
C News TV Kannada News Online in cnewstv





