Breaking News

ಶಿವಮೊಗ್ಗ

ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ – ಬಿಎಸ್ ವೈ.

ಶಿವಮೊಗ್ಗಕ್ಕೆ ಕಾಂಗ್ರೆಸ್ಸಿನಿಂದ ಯಾರು ಪ್ರಚಾರ ಬರ್ತಾರೋ ಬಿಡ್ತಾರೋ ಬಿಡ್ತಾರೋ, ಸರ್ಕಾರವೇ ಬಂದು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದರು ರಾಘವೇಂದ್ರ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ .ಈ ಲೋಕಸಭಾ ಚುನಾವಣೆ ನಂತರ ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗ ತಮಿಳು ಸಮಾಜದ ಇಬ್ಬರು ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗ ಮಾಡುತ್ತೇನೆ ಎಂದು ಭದ್ರಾವತಿಯಲ್ಲಿ ಮಾಧ್ಯಮದವರೊಂದಿಗೆ ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮಕೂರು, ಮಂಡ್ಯ ಹಾಸನದಲ್ಲಿ ಮೊದಲು ಗೆಲ್ಲಲಿ ಬಳಿಕ ಶಿವಮೊಗ್ಗ ಕ್ಷೇತ್ರದತ್ತ ಗಮನಹರಿಸಲಿ ಎಂದ ಬಿಎಸ್ ವೈ. ...

Read More »

ನಮ್ಮ ಅಧಿಕಾರದಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್ ಪೀಠ ಮತ್ತು ಚೆನ್ನೈನಲ್ಲಿ ಸರ್ವಜ್ಞ ಪೀಠ ಸ್ಥಾಪನೆ – ಬಿಎಸ್ ಯಡಿಯೂರಪ್ಪ

  ಭದ್ರಾವತಿ ನಗರದ ಕನಕ ಮಂಟಪದಲ್ಲಿ ತಿರುವಳ್ಳುವರ್ ಸೇವಾ ಸಂಘದ ವತಿಯಿಂದ “ಸ್ನೇಹ ಮಿಲನ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತು. ಕಾರ್ಯಕ್ರಮ ದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ ಬೆಂಗಳೂರಿನಲ್ಲಿ ಸರ್ವಜ್ಞ ಪೀಠ ಸ್ಥಾಪಿಸಲು ,ಕಾಂಗ್ರೆಸ್ ಹಿಂದೇಟು ಹಾಕಿತ್ತು .ಆದರೆ ನಾವು ತಮಿಳು ಕನ್ನಡಿಗರು ಒಂದೇ ತಾಯಿಯ ಮಕ್ಕಳು ಎಂದು ಭೇದಭಾವ ಇಲ್ಲದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರೊಂದಿಗೆ ಸೇರಿ .ಚೆನ್ನೈನಲ್ಲಿ ಸರ್ವಜ್ಞ ಪೀಠ ಮತ್ತು ಬೆಂಗಳೂರಿನಲ್ಲಿ ತಿರುವಳ್ಳೂರು ಪೀಠವನ್ನು , ಸ್ಥಾಪಿಸಲಾಗಿತ್ತು ತಮಿಳು ಸಮಾಜದ ಬಂಧುಗಳು ...

Read More »

ಮಾನವೀಯತೆ ಮೆರೆದ ಟ್ರೆಡಿಷನಲ್ ಡೇ.

ಶಿವಮೊಗ್ಗ: ಕಾಲೇಜುಗಳ ಟ್ರಡಿಷನಲ್‌ ಡೇ ಎಂದರೆ ವಿದ್ಯಾರ್ಥಿಗಳು  ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಭರ್ಜರಿಯಾಗಿಯೇ‌ ನಡೆಯುತ್ತದೆ. ವಿದ್ಯಾರ್ಥಿಗಳು ಈ ದಿನಗಾಗಿಯೇ ಕಾಯುತ್ತಿರುತ್ತಾರೆ…ಆದರೆ ಇವೆಲ್ಲವುಗಳೊಂದಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಮಾನವೀಯತೆ ಮೆರೆದ ಶಿವಮೊಗ್ಗ ಎಟಿಎನ್ ಸಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಎಟಿಎನ್ ಸಿ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಹಾಗೂ ಯುಗಾದಿ ಹಬ್ಬದ  ಅಂಗವಾಗಿ ತಮ್ಮ ಅಧ್ಯಾಪಕೊಂದಿಗೆ ಸೇರಿ ಅಕ್ಕಿ ಸಂಗ್ರಹಿಸಿ ಸಂಗ್ರಹವಾದ ಅಕ್ಕಿಯನ್ನು ತಾಯಿಮನೆ ಸಂಸ್ಥೆ ಗೆ  ನೀಡಿ ಮಾನವೀಯತೆ ಮೆರೆದಿದ್ದಾರೆ…

Read More »

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಅಭ್ಯರ್ಥಿಗಳು…

  ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದೆ.. ಇಬ್ಬರೂ ಮಾಜಿ ಮುಖ್ಯಮಂತ್ರಿ ಮಕ್ಕಳ ಪೈಪೋಟಿಯ ನಡುವೆಯೂ ಸಹ ಪ್ರತ್ಯೇಕ ಅಭ್ಯರ್ಥಿಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.. ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವಂತಹ 14 ಅಭ್ಯರ್ಥಿಗಳ ವಿವರ.. ಅಭ್ಯರ್ಥಿಯ ಹೆಸರು   ಮತ್ತು     ಪಕ್ಷದ ಹೆಸರು 1. ಶೇಖರ್ ನಾಯ್ಕ್   –      ಪಕ್ಷೇತರ 2.ಬಿ.ವೈ. ರಾಘವೇಂದ್ರ     –    ಬಿ.ಜೆ.ಪಿ 3.ಎಸ್ ಮಧು ಬಂಗಾರಪ್ಪ ...

Read More »

ಬಿಜೆಪಿ ಭದ್ರ ಕೋಟೆಯಲ್ಲಿ ಮೈತ್ರಿ ಪಕ್ಷದ ಶಕ್ತಿ ಪ್ರದರ್ಶನ..

ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಬೃಹತ್ ರಾಲಿಯನ್ನು  ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹಮ್ಮಿಕೊಂಡಿದ್ದರು. ‌ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ತನ್ನ ಶಕ್ತಿ ಪ್ರದರ್ಶನ ತೋರಿಸಿತ್ತು.   ಮಧು ಬಂಗಾರಪ್ಪನವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಯ ಕ್ವಿಕ್ ಲುಕ್.

Read More »

ಪ್ರಜಾಕೀಯ ಪಕ್ಷ ದಿಂದ ಕಣಕ್ಕಿಳಿದ ಅಭ್ಯರ್ಥಿ

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಈ ಬಾರಿ  ಖ್ಯಾತ ಚಲನಚಿತ್ರ ನಟ ರಿಯಲ್ ಸ್ಟಾರ್ ಉಪೇಂದ್ರ ರವರ ಉತ್ತಮ ಪ್ರಜಾತೀಯ ಪಕ್ಷದಿಂದ ಶರಾವತಿ ನಗರ ವೆಂಕಟೇಶ್ ಕಣಕ್ಕಿಳಿದಿದೆ. ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ವೆಂಕಟೇಶ್, ನಮ್ಮ ಪಕ್ಷ ಜನವೇ ಪ್ರಚಾರ ಮಾಡುವ ಪಕ್ಷ. ನಾವು ಕೇವಲ ಅವರ ಸೇವಕರು. ಈ ಬಾರಿ ಪ್ರಜ್ಞಾಪೂರ್ವಕ ನಾಗರಿಕರು ನಮಗೆ ಮತ ಹಾಕುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Read More »

ಅಡ್ವಾಣಿ ಅವರನ್ನು ಮೂಲೆಗು‌ಂಪು ಮಾಡಿದಂತೆ ಯಡಿಯೂರಪ್ಪ ಕೂಡ ಮೂಲೆಗುಂಪಾಗಲಿದ್ದಾರೆ – ಬೇಳೂರು ಗೋಪಾಲಕೃಷ್ಣ

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಯಡಿಯೂರಪ್ಪ ಅವರು ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ದುರಂತದ ಸಂಗತಿ. ಹೇಗೆ ಅಡ್ವಾಣಿ ಅವರನ್ನು ಮೂಲೆಗು‌ಂಪು ಮಾಡಿದಾರೇ ಹಾಗೇ ಯಡಿಯೂರಪ್ಪ ಅವರನ್ನೂ ಮೂಲೆಗುಂಪು ಮಾಡುವುದು ಖಚಿತ. ಇನ್ನೂ ಸದಾನಂದ ಗೌಡರೇ ಚುನಾವಣೆ ಬಳಿಕ ಯಡಿಯೂರಪ್ಪ ಅಧ್ಯಕ್ಷರಾಗಿ ಇರುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.. ಬಿಜೆಪಿಯವರು ಮಾತು ಮಾತಿಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ನಾವೂ ಹಿಂದುಗಳೆ, ನಾವು ಹಿಂದುತ್ವದ ಪಾಠ ಅವರಿಂದ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು. ಬಿಜೆಪಿಯವರು ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಆಸ್ತಿ 9 ಕೋಟಿ ...

Read More »

ಹೆಲಿಕಾಪ್ಟರ್‌ನಲ್ಲಿಯೇ ಪ್ರಚಾರ ಮಾಡಲಿರುವ ಅಭ್ಯರ್ಥಿ.‌..

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ರಾಜಾವತ್ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿಯಲಿದ್ದಾರೆ..ಕಳೆದ ಬಾರಿ ಶಿಕಾರಿಪುರದಿಂದ ಸ್ಪರ್ಧಿಸಲು ಹೆಲಿಕಾಪ್ಟರ್‌ನಲ್ಲಿ ಬಂದು ಗಮನ ಸೆಳೆದಿದ್ದ ವಿನಯ್ ರಾಜಾವತ್, ಈ ಬಾರಿಯೂ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿಯೇ ತೆರಳಲಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಹೆಲಿಕಾಪ್ಟರ್‌ನಲ್ಲಿಯೇ ಸುತ್ತಾಡಿ ಪ್ರಚಾರ ಮಾಡಲಿದ್ದಾರೆ.‌  

Read More »

ವರುಣನ ಆಗಮನದಿಂದ ಶಿವಮೊಗ್ಗ ಕೂಲ್ ಕೂಲ್.

ಬಿಸಿಲಿನಿಂದ ಹೈರಾಣಾಗಿದ್ದ ಮಲೆನಾಡಿನ ಜನತೆಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ..ನಗರದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಜನ ಖುಷಿಯಾಗಿದ್ದಾರೆ.. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಆಗಿದೆ..ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳನ್ನು ಸಹ ಮಳೆಯಾಗಿದೆ..

Read More »

ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಸಿದ್ಧವಾಗಿದೆ ಸಾಂಗ್

  2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಬೇಕು‌. ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್ ಒನ್ ಆಗಬೇಕು. ಈ ಉದ್ದೇಶದಿಂದ ಜಿಲ್ಲಾಡಳಿತದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ನಿಟ್ಟಿನಲ್ಲಿ ಮತದಾರರ ಜಾಗೃತಿಗಾಗಿ ಥೀಮ್ ಸಾಂಗ್ ರಚಿಸಿದ್ದು ಅದನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಇಂದು ಕುವೆಂಪು ರಂಗಮಂದಿರದಲ್ಲಿ ಬಿಡುಗಡೆ ಮಾಡಿದರು.. ಥೀಮ್ ಸಾಂಗ್ ನ ಸಂಗೀತ ನಿರ್ದೇಶನವನ್ನು ಅಮಿತ್ ಎಸ್ ಕುಮಾರ್ ಮಾಡಿದ್ದು, ಗೀತ ರಚನೆಯನ್ನು ಸಮನ್ವಯ ಕಾಶಿ ಮತ್ತು ಕವಿ ನಿತಿ‌ನ್ ಜಯ್, ವಿಠ್ಠಲ ರಂಗಧೋಳ್ ಮಾಡಿದ್ದು, ಥೀಮ್ ಸಾಂಗ್ ...

Read More »