Cnewstv.in / 19.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಳೆ ಆರ್ಭಟಕ್ಕೆ ತತ್ತರಿಸಿದ ಶಿವಮೊಗ್ಗ ಜನತೆ..
ಶಿವಮೊಗ್ಗ : ಇಂದು ಬೆಳಿಗ್ಗೆ ಸುರಿದ ಮಳೆಗೆ ಶಿವಮೊಗ್ಗ ಜನತೆ ತತ್ತರಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇಂದು ಮುಂಜಾನೆ ಮತ್ತಷ್ಟು ಮಳೆ ಜೋರಾಗಿದೆ. ಪರಿಣಾಮವಾಗಿ ಶಿವಮೊಗ್ಗದ ಅನೇಕ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿದೆ. ಇನ್ನು ತಗ್ಗು ಪ್ರದೇಶದ ಜನರ ಪರಿಸ್ಥಿತಿಯನ್ನು ಹೇಳತೀರದಾಗಿದೆ.
ಸದ್ಯ ಮಳೆ ಸ್ವಲ್ಪಮಟ್ಟಿಗೆ ವಿರಾಮ ನೀಡಿದೆ. ನಗರದ ಗೋಪಾಲ ಗೌಡ ಬಡಾವಣೆ, ಗಾಂಧಿನಗರ, ಬಾಪೂಜಿನಗರ ಭಾಗಶಹ ಜಲಾವೃತವಾಗಿದೆ. ಪೆಸಿಟ್ ಕಾಲೇಜ್ ಮುಂಭಾಗ, ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಸಾಗರ ರಸ್ತೆಯ ಐಲೆಟ್ಸ್ ಡಯಾಬಿಟಿಕ್ ಹಾಸ್ಟಿಟರ್ ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿದೆ.