Breaking News

ಗಲಾಟೆಗೆ ಪ್ರಚೋದನೆ ನೀಡಿದ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ.

Cnewstv.in / 20.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಲಾಟೆಗೆ ಪ್ರಚೋದನೆ ನೀಡಿದ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ.

ಶಿವಮೊಗ್ಗ : ಶಾಂತಿಯಿಂದ ಇದ್ದ ಕರ್ನಾಟಕದಲ್ಲಿ ಗಲಭೆಗಳ ಮೂಲಕ ಶಾಂತಿ ಕದಡಲಾಗಿದೆ. ಹುಬ್ಬಳ್ಳಿಯ ಘಟನೆಯ ಬಗ್ಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ ನವರು ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನ ಭಾಷಣ ಮಾಡಿದ್ದಾನೆ.

RSS ಮುರ್ದಾಬಾದ್ ಘೋಷಣೆಗಗಳನ್ನು ಕೋಗಿದ್ದಾರೆ. ಕಲ್ಲೂ ತೂರಾಟ ಮಾಡಿರುವ ಪುಂಡರನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗೆ ಇದೆ ಆದರೆ ಕಾನೂನು ಕೈಗೆ ತೆಗೆದುಕೊಳ್ಳಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ದೇಶ ದ್ರೋಹ ಮಾಡಿ ಓಡಿಹೋಗಿರುವ ಮೌಲ್ವಿಯನ್ನು ಬಂಧಿಸಬೇಕು. ಕೊಲೆ ಮಾಡಿವರನ್ನು ಬಂಧನ ಮಾಡುವುದು, ನಂತರ ಅವರು ಜಾಮೀನಿನ ಮೇಲೆ ಹೊರಗೆ ಬರುವುದು ಅಭ್ಯಾಸವಾಗಿದೆ. ಗೂಂಡಾಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು.‌ ಇವರ ವಿರುದ್ಧ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಈ ಘಟನೆಯ ಹಿಂದೆ ಇರುವ ವ್ಯಕ್ತಿ, ಸಂಘನೆ, ಪಕ್ಷ ವನ್ನ ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನು ಒದಿ : https://cnewstv.in/?p=9492

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*