Cnewstv.in / 10.4.2022 / ತುಮಕೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭಾವೈಕ್ಯತೆಯ ಶ್ರೀರಾಮನವಮಿ..
ತುಮಕೂರು : ಇಂದು ರಾಜ್ಯಾದ್ಯಂತ ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅಂತೆಯೇ ತುಮಕೂರಿನಲ್ಲಿ ಭಾವೈಕ್ಯತೆಯಿಂದ ಶ್ರೀರಾಮನವಮಿಯನ್ನು ಆಚರಿಸಲಾಯಿತು.
ತುಮಕೂರಿನ ಭದ್ರಮ ಸರ್ಕಲ್ ಬಳಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕೋಟೆ ನೇತೃತ್ವದಲ್ಲಿ ಮುಸ್ಲಿಂ ಯುವಕರು ಶ್ರೀರಾಮನ ಫೋಟೋಗೆ ಪೂಜೆ ಸಲ್ಲಿಸಿ, ಹಿಂದೂ ಯುವಕರ ಜೊತೆಯಲ್ಲಿ ಭಕ್ತರಿಗೆ ಪಾನಕ ಕೋಸುಂಬರಿ ಹಂಚುವುದರ ಮೂಲಕ ಭಾವೈಕ್ಯತೆಯಿಂದ ರಾಮನವಮಿಯನ್ನು ಆಚರಿಸಲಾಯಿತು.
ಇದನ್ನು ಒದಿ : https://cnewstv.in/?p=9352
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv