Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪೊಲೀಸ್ ಇಲಾಖಾ ವತಿಯಿಂದ ರೂಟ್ ಮಾರ್ಚ್
ಶಿವಮೊಗ್ಗ : ಬಜರಂಗ ಕಾರ್ಯಕರ್ತನ ಹತ್ಯೆ ನಂತರ ನಗರದಲ್ಲಿ ಜರುಗಿದ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇಂದು ಬೆಳಗ್ಗೆ ಪೊಲೀಸ್ ಇಲಾಖಾ ವತಿಯಿಂದ ರೂಟ್ ಮಾರ್ಚ್ ನಡೆಸಲಾಯಿತು. ನಗರದ ಎಎ ಸರ್ಕಲ್ ನಿಂದ ಪ್ರಾರಂಭವಾಗಿರುವ ರೂಟ್ ಮಾರ್ಚ್, ಓಟಿ ರಸ್ತೆ, ಸೀಗೆಹಟ್ಟಿ, ಬಿಬಿ ರಸ್ತೆ, ವಂದನ ಟಾಕೀಸ್, ಸಿದ್ದಯ್ಯ ಸರ್ಕಲ್, MKK ರಸ್ತೆ, AA ಸರ್ಕಲ್, SN ಸರ್ಕಲ್, ಲಷ್ಕರ್ ಮೊಹಲ್ಲ ಮೂಲಕ AA ಸರ್ಕಲ್ ನಲ್ಲಿ ಮುಕ್ತಾಯವಾಯಿತು.
ಇದನ್ನು ಒದಿ : https://cnewstv.in/?p=8642

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv