Cnewstv.in / 22.01.2022/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಎಎಸ್ಐ ಹಾಗೂ ಅಟೋಚಾಲಕರಿಗೆ ಸನ್ಮಾನ.
ಶಿವಮೊಗ್ಗ : ತುಂಗಾ ನದಿ ಬಳಿ ಹಳೆ ಸೇತುವೆ ಮೇಲಿನಿಂದ ಹಾರಿದ ವ್ಯಕ್ತಿಯೋರ್ವನನ್ನು ಆಟೋ ಚಾಲಕರ ಸಹಾಯದೊಂದಿಗೆ ರಕ್ಷಿಸಿದ ಪೊಲೀಸ್ ಅಧಿಕಾರಿ ಹಾಗೂ ಆಟೋ ಚಾಲಕರಿಗೆ ಜಿಲ್ಲಾ NSUI ವತಿಯಿಂದ ಸನ್ಮಾನಿಸಲಾಯಿತು.
ಈ ಕರ್ತವ್ಯಕ್ಕಾಗಿ NSUI ವತಿಯಿಂದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರವರಿಗೆ ಮತ್ತು ಆಟೋ ಚಾಲಕರಾದ ಅರ್ಜುನ್ ಕಾಂತ ರವರಿಗೂ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಚಿರಂಜೀವಿ ಬಾಬಣ್ಣ, ರಾಜ್ಯ NSUI ಕಾರ್ಯದರ್ಶಿ ಎಚ್.ಎಸ್ ಬಾಲಾಜಿ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ತಾಂದ್ಲೆ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಪುರಲೆ, ಯುವ ಮುಖಂಡರುಗಳಾದ , ಅನ್ನು , ಪ್ರಮೋದ್,ಸಂದೀಪ್ ಅಟೋಕ್, ಮಂಜು, ಲಕ್ಷ್ಮಣ್, ಗಿರೀಶ್, ಪದ್ಮನಾಭ್,ಚಂದನ್, ವಿಜಯ್ ಹಾಗೂ ಇನ್ನೂ ಹಲವರು ಭಾಗಿಯಾಗಿದ್ದರು
ಇದನ್ನು ಒದಿ : https://cnewstv.in/?p=7817
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv