Breaking News

ಉತ್ತರಪ್ರದೇಶ : ಬಿಜೆಪಿ ತೊರೆದ ಘಟಾನುಘಟಿ ನಾಯಕರು, 3 ದಿನದಲ್ಲಿ 8 ಜನರಿಂದ ರಾಜಿನಾಮೆ.

Cnewstv.in / 13.01.2022 / ಉತ್ತರಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಉತ್ತರಪ್ರದೇಶ : ಬಿಜೆಪಿ ತೊರೆದ ಘಟಾನುಘಟಿ ನಾಯಕರು, 3 ದಿನದಲ್ಲಿ 8 ಜನರಿಂದ ರಾಜಿನಾಮೆ.

ಉತ್ತರ ಪ್ರದೇಶ : ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಘಟಾನುಘಟಿ ನಾಯಕರು ಸಾಲುಸಾಲಾಗಿ ರಾಜೀನಾಮೆ ನೀಡುತ್ತಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಸರ್ಕಾರದಿಂದ ಗೌರವದ ಕೊರತೆ ಇದೆ ಎಂದು ಆರೋಪಿಸಿ ಮುಕೇಶ್ ವರ್ಮ ಮೊದಲು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಇದೇ ಸಂದರ್ಭದಲ್ಲಿ ಇನ್ನಷ್ಟು ಮಂದಿ ಸಚಿವರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದರು.

ಇದೇ ಬೆನ್ನಲ್ಲೇ ಉತ್ತರಪ್ರದೇಶದ‌ ಬಿಜೆಪಿ ನಸಯಕರು ಪಕ್ಷವನ್ನು ತೊರೆಯುತ್ತಿದ್ದಾರೆ. ಮೂರು ದಿನದಲ್ಲಿ ಬರೋಬ್ಬರಿ 8 ಸಚಿವರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈಗಾಗಲೇ ಬಿಜೆಪಿ ಶಾಸಕರಾದ ಮುಕೇಶ್ ವರ್ಮ, ವಿನಯ್ ಸಾಕ್ಯಾ, ಬ್ರಿಜೇಶ್ ಪ್ರಜಾಪತಿ, ರೋಷನ್ ಲಾಲ್, ಭಗ್ವತಿ ಸಾಗರ್, ವಿನಯ್ ಸಾಂಖ್ಯ ಸೇರಿದಂತೆ ಹಲವಾರು ರಾಜೀನಾಮೆಗೆ ನೀಡಿದ್ದಾರೆ.

ಇಷ್ಟೆ ಅಲ್ಲದೇ ಉತ್ತರಪ್ರದೇಶದಲ್ಲಿ ಇನ್ನೂ ಅನೇಕ ಸಚಿವರು ಶಾಸಕರು ಬಿಜೆಪಿ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ಒದಿ : https://cnewstv.in/?p=7549

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*