cnewstv.in /19.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಫ್ಯಾಬ್ ಇಂಡಿಯಾ ಸಂಸ್ಥೆಯು ಅಕ್ಟೋಬರ್ 9ರಂದು ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆ ಸಂಗ್ರಹವನ್ನು “ಜಶ್ನ್ ಇ ರೀವಾಜ್ ಹೆಸರಿನಲ್ಲಿ ಪ್ರಕಟಿಸಿತ್ತು.
ಈ ಪೋಸ್ಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವಿರೋಧವನ್ನ ವ್ಯಕ್ತ ಪಡಿಸಿದರು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಫ್ಯಾಬ್ ಇಂಡಿಯಾ ಅಭಿಯಾನವನ್ನೇ ಆರಂಭಿಸಿದರು. ಅದರಲ್ಲಿಯೂ ಪ್ರಮುಖವಾಗಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯಯವರು ಫ್ಯಾಬ್ ಇಂಡಿಯಾ ಸಂಸ್ಥೆಯ ಈ ಜಾಹೀರಾತನ್ನು ಖಂಡಿಸಿದ್ದಾರೆ.
ಈ ಜಾಹೀರಾತನ್ನು ಕಂಪನಿ ಉದ್ದೇಶಪೂರ್ವಕವಾಗಿಯೇ ಹಾಕಿದೆ. ಈ ಜಾಹೀರಾತಿನಲ್ಲಿ ಹಿಂದೂಯೇತರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದಾಗಿ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅನೇಕ ವಿವಾದಗಳ ನಂತರ ಫ್ಯಾಬ್ ಇಂಡಿಯಾ ಸಂಸ್ಥೆಯು ತನ್ನ ಜಾಹಿರಾತನ್ನು ಹಿಂಪಡೆದಿದೆ.
ಇದನ್ನು ಓದಿ : https://cnewstv.in/?p=6497
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments