Cnewstv.in / 26.09.2021/ ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿದ ತಹಸಿಲ್ದಾರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.
ಅರುಣ್ ಶ್ರೀಖಂಡೆ ಎಂಬ ತಹಶಿಲ್ದಾರ್ ಒಬ್ಬರ ಜಮೀನನ್ನು ಮತ್ತೊಬ್ಬರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ನೋಂದಾಯಿಸಿದ್ದಾರೆ.
ಮಾರುತಿ ಕರಗಾರ ಎಂಬುವರ ಹೆಸರಿನಲ್ಲಿದ್ದ ಜಮೀನನ್ನ ಬೀರಾ ಅಪ್ಪಣ್ಷ ಕರಗಾರ ಎಂಬುವವರ ಜೊತೆ ಸೇರಿ ನಕಲಿ ದಾಖಲೆ ತಯಾರಿಸಿ ಬೇರೊಬ್ಬರ ಹೆಸರಿಗೆ ನೋಂದಾಯಿಸಿದ್ದಾರೆ.
ಜಮೀನಿನ ಮಾಲೀಕರಾದ ಮಾರುತಿ ಕಾರಗಾರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ, ತಹಶೀಲ್ದಾರ್ ಶ್ರೀಖಂಡೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿ : https://cnewstv.in/?p=6207
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv