Cnewstv.in / 13.09.2021/ ಮೈಸೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಗಜಪಯಣಕ್ಕೆ ಚಾಲನೆ ನೀಡಲಾಯಿತು.
ವೀರನಹೊಸನಹಳ್ಳಿ ಯಲ್ಲಿ ಇಂದು ಬೆಳಿಗ್ಗೆ ಗಜಪಡೆಗೆ ಪೂಜೆ ಸಲ್ಲಿಸಲಾಯಿತು ದಸರಾ ಮೆರವಣಿಗೆಗಾಗಿ ಈ ಬಾರಿ 5 ಗಂಡಾನೆ, 3 ಹೆಣ್ಣಾನೆಯನ್ನು ಕಾಡಿನಿಂದ ನಾಡಿಗೆ ಬರಮಾಡಿಕೊಳ್ಳಲಾಯಿತು.

ಈ ಬಾರಿಯ ದಸರಾ ಅಂಬಾರಿಯನ್ನು 56 ವರ್ಷದ ಅಭಿಮನ್ಯು ಹೊರಲಿದೆ. ಅಭಿಮನ್ಯುವಿನ ಗಜಪಡೆಯ ನೇತೃತ್ವದಲ್ಲಿ 34 ವರ್ಷದ ಅಶ್ವತ್ಥಾಮ, 43 ವರ್ಷದ ಧನಂಜಯ, 34 ವರ್ಷದ ಅಶ್ವತ್ಥಾಮ, 58 ವರ್ಷದ ವಿಕ್ರಮ, 48 ವರ್ಷದ ಚೈತ್ರ, 44 ವರ್ಷದ ಕಾವೇರಿ, 20 ವರ್ಷದ ಲಕ್ಷ್ಮಿ, 38 ವರ್ಷದ ಗೋಪಾಲಸ್ವಾಮಿ ಆನೆಗಳು ತಯಾರಾಗಿದೆ. ಇದೇ ಮೊದಲ ಬಾರಿಗೆ ಅಶ್ವಥಾಮ ದಸರಾ ಉತ್ಸವಕ್ಕೆ ಆಗಮಿಸಿದೆ.
ಇದನ್ನು ಓದಿ : https://cnewstv.in/?p=5903
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv