Cnewstv.in / 04.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಈಜಲು ಹೊಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ ಸಾವನ್ನಪ್ಪಿರುವ ಘಟನೆ ಭದ್ರಾ ಜಲಾಶಯದ ಬಳಿಯ ಗೊಂದಿ ಚೆಕ್ ಡ್ಯಾಂ ನಲ್ಲಿ ನಡೆದಿದೆ. ಮೃತರನ್ನು ಕೊಮ್ಮನಾಳ್ ಗ್ರಾಮದ ಶಶಾಂಕ್ (19) ಹಾಗೂ ಶಿವಮೊಗ್ಗದ ಮಂಜುನಾಥ ಬಡಾವಣೆಯ ಕಿರಣ್ (19) ಎಂದು ಗುರುತಿಸಲಾಗಿದೆ.
ಎಜುಕೇರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಐವರು ವಿದ್ಯಾರ್ಥಿಗಳು ಗೋಂದಿ ಚೆಕ್ ಡ್ಯಾಂ ವೀಕ್ಷಣೆಗೆ ಹೋಗಿದ್ದಾರೆ. ಆಗ ಶಶಾಂಕ್ ಮತ್ತು ಕಿರಣ್ ನೀರಿಗೆ ಇಳಿದಿದ್ದಾರೆ. ಕೆಲವೇ ನಿಮಿಷಗಳಲ್ಲಿ ನೀರಿನ ಸೆಳೆತಕ್ಕೆ ಶಶಾಂಕ್ ಮತ್ತು ಕಿರಣ್ ಮುಳುಗಿದ್ದಾರೆ.
ಉಳಿದ ಸ್ನೇಹಿತರು ಹಾಗೂ ಗ್ರಾಮಸ್ಥರು ಸಹಾಯಕ್ಕೆ ಆಗಮಿಸುವ ವೇಳೆಗೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಒದಿ : https://cnewstv.in/?p=5758
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv