Breaking News

ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಸೇರ್ಪಡೆಯಾದ ಹಿನ್ನೆಲೆ, ಸಮಾಜಮುಖಿ ಕಾರ್ಯಕ್ರಮದ ಮ‌ೂಲಕ ಬೆಂಬಲಿಗರ ಸಂಭ್ರಮಾಚರಣೆ.

Cnewstv.in / 30.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ತವರು ಕ್ಷೇತ್ರ ಸೊರಬದಲ್ಲಿ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಸಿದ್ದರು.

ಸೊರಬದ ಶ್ರೀ ರಂಗನಾಥ ಹಾಗೂ ದುರುಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ನಂತರ ಸೊರಬದ ಅಂಬೇಡ್ಕರ್ ಬಡಾವಣೆ, ಆಟೋಸ್ಟ್ಯಾಂಡ್ ಹಾಗೂ ರಂಗನಾಥ ದೇವಾಲಯದ ಮುಂದೆ ಸಾರ್ವಜನಿಕರಿಗೆ ಹಾಲು ವಿತರಣೆ ಮಾಡಿ, ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು

ಸೊರಬಾ ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಕ್ರಮದ ಮ‌ೂಲಕ ಸಂಭ್ರಮಾಚರಣೆ ನಡೆಸಿದ್ದರು. ಮೆಹಬೂಬ್ ಬಾಷಾ, ಸಿರಾಜುದ್ದೀನ್, ನಾಗರಾಜ್, ಶೋಭಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಇದನ್ನು ಒದಿ : https://cnewstv.in/?p=5276

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*