Breaking News

ಬಸ್ ತಂಗುದಾಣದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಅಂದರ್

Cnewstv.in / 14.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಎನ್ ಟಿ ರಸ್ತೆಯಲ್ಲಿರುವ ಗಾಜನೂರು ಬಸ್ ತಂಗುದಾಣದಲ್ಲಿ ಜುಲೈ 2 ರಂದು ಲತಾ ಬಾಯಿ ಎಂಬುವವಳನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೊಮಾರನಹಳ್ಳಿ ತಾಂಡಾದ ದೇವೇಂದ್ರಪ್ಪ ಎಂಬಾತನನ್ನು ಬಂಧಿಸಲಾಗಿದೆ.

ಜುಲೈ ಒಂದರಂದು ಮಧ್ಯರಾತ್ರಿ ಕುಡಿಯುವ ವಿಚಾರದಲ್ಲಿ ದೇವೇಂದ್ರಪ್ಪ ಮತ್ತು ಲತಾ ಬಾಯಿ ನಡುವೆ ಜಗಳವಾಗಿದೆ. ಅದು ಬೆಳಗಿನ ಜಾವ ಲತಾ ಬಾಯಿ ಮೇಲೆ ಮಾನಭಂಗಕ್ಕೆ ಯತ್ನಿಸಿ ಗೋಡೆಗೆ ತಳ್ಳಿ ಹತ್ಯೆ ಮಾಡಿರುವುದಾಗಿ ಆರೋಪಿ ದೇವೇಂದ್ರಪ್ಪ ತಪ್ಪೊಪ್ಪಿಕೊಂಡಿದ್ದಾನೆ. ಜುಲೈ 2ರಂದು ಘಟನೆ ನಡೆದಿದ್ದು 12ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನು ಒದಿ : https://cnewstv.in/?p=5056

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*