Cnewstv.in / Shivamogga / 02.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೊರೊನಾ ಮತ್ತು ಬ್ಲಾಕ್ ಫಂಗಸ್ ಭೀತಿಯಿಂದ ತಪ್ಪಿಸಿಕೊಳ್ಳಲು ಇರುವ ದಾರಿ ಎಂದರೆ ಸುರಕ್ಷತೆ ಹಾಗೂ ಮುಂಜಾಗೃತೆ. ಈ ಎರಡನ್ನೂ ಶಿಸ್ತುಬದ್ಧವಾಗಿ, ನಿರ್ಲಕ್ಷ್ಯವಿಲ್ಲದೆ ಮಾಡಿದರಷ್ಟೆ, ಮಾರಕ ಸೋಂಕಿನಿಂದ ಪಾರಾಗಬಹುದು. ಈ ಉದ್ದೇಶದೊಂದಿಗೆ, ರಾಜ್ಯ ಜೆಡಿಎಸ್ನ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಶಿವಮೊಗ್ಗದಲ್ಲಿ ವಿವಿಧ ವರ್ಗಗಳ ಜನರಿಗೆ ಫೇಸ್ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರದ ಕಿಟ್ಗಳನ್ನು ಒದಗಿಸುತ್ತಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಈ ಮಾನವೀಯ ಸಹಾಯದ ಕಾರ್ಯದಲ್ಲಿ, ಮೊನ್ನೆ ನಗರದಲ್ಲಿ ಹೋಮ್ಗಾರ್ಡ್ಗಳಿಗೆ, ನಿನ್ನೆ ಶಿವಮೊಗ್ಗ ನಗರದಲ್ಲಿ ಜೊಮ್ಯಾಟೋದ ಮೂಲಕ ಫೇಸ್ ಶೀಲ್ಡ್ , ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು. ಇವತ್ತು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ನ ಬಳಿ, ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ಗಳನ್ನ ವಿತರಿಸಲಾಯಿತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv