Cnewstv.in / Shivamogga / 17.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೋವಿಡ್-19 ಲಾಕ್ ಡೌನ್ ಆದ ಕಾರಣದಿಂದ ಗೋವುಗಳಿಗೆ ಮೇಯಿಸಲು ತೊಂದರೆಯಾಗುತ್ತಿರುವುದರಿಂದ ಜ್ಞಾನೇಶ್ವರಿ ಗೋಶಾಲೆಗೆ ಶಿವಮೊಗ್ಗ ಭಾವುಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಗೋವುಗಳಿಗೆ ಹಿಂಡಿ ಬೂಸಾ ಆಹಾರವನ್ನು ನೀಡಲಾಯಿತು. ಕಾರ್ಯಕ್ರಮ ದ ನೇತೃತ್ವವನ್ನು ಸಂಘದ ಅಧ್ಯಕ್ಷರಾದ ವಿನಯ್ ತಾಂದ್ಲೆಯವರು ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಭಾವಸಾರ ಕ್ಷತ್ರಿಯ ಸೊಸೈಟಿಯ ಅಧ್ಯಕ್ಷರಾದ ಗಿರೀಶ್ ನಾಜರೆ, ರಾಕೇಶ್ ಸಾಕ್ರೆ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸಚಿನ್ ಬೇದ್ರೆ,ಯುವಕ ಸಂಘದ ಉಪಾಧ್ಯಕ್ಷರಾದ ಮಂಜುನಾಥ್ ಬೇದ್ರೆ, ದತ್ತಾತ್ರೇಯ, ಖಜಾಂಚಿ ಆದಂತಹ ಕಿರಣ್ ಬಾಂಬೋರೆ,ಯುವಕ ಸಂಘದ ಪ್ರಮುಖರಾದ ಸುಬ್ಬು,ಹರೀಶ್ ಉತ್ತರ್ಕರ್,ಶಾಮರಾವ್ ಪ್ರಶಾಂತ್ ರಾಘವೇಂದ್ರ ರಂಗದೊಳ್,ನಿತೀಶ್, ವಿಜಯ್, ಭರತ್ ಹಾಗೂ ಯುವಕ ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv