ಶಿವಮೊಗ್ಗ : ಡ್ರಗ್ಸ್ ಸೇವನೆ ಹಾಗೂ ಮಾರಾಟದಿಂದ ದೂರವಿರಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಯುವಜನರಿಗೆ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವರು ವ್ಯಕ್ತಿಗಳು ಯುವಕರ ದಾರಿ ತಪ್ಪಿಸಿ ಅವರನ್ನು ಹಾಳು ಮಾಡುತ್ತಿದ್ದಾರೆ. ಕೆಲವರು ಡ್ರಗ್ಸ್ ಸೇವಿಸಿ ಹಾಗೂ ಮಾರಾಟ ಮಾಡಿ ಜೈಲಿಗೆ ಹೋಗುವುದನ್ನು ನಾವು ನೋಡುತ್ತಿದ್ದೇವೆ. ಯುವಜನತೆ ಡ್ರಗ್ಸ್ ನಿಂದ ದೂರ ಇರಬೇಕು. ಆದರೆ ಇಂದು ಯುವನತೆ ಡ್ರಗ್ಸ್ ನಿಂದ ದಾರಿತಪ್ಪುತ್ತಿರುವುದು ಆತಂಕಕಾರಿ ಸಂಗತಿ. ಹೀಗಾಗಿ ಯುವಕರು ಡ್ರಗ್ಸ್ ಸೇವನೆ ಹಾಗೂ ಮಾರಾಟದಿಂದ ದೂರ ಇದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕು ಎಂಬುದು ನನ್ನ ಪ್ರಾರ್ಥನೆಯಾಗಿದೆ ಎಂದರು.
C News TV Kannada News Online in cnewstv