Breaking News

ಗುಲಾಬಿ, ಚಪ್ಪಲಿ ಇಟ್ಟು ನದಿಗೆ ಧುಮುಕಿ ಪ್ರೇಮಿಗಳ ಆತ್ಮಹತ್ಯೆ.

 

ಶಿವಮೊಗ್ಗ : ಬೈಪಾಸ್ ರಸ್ತೆ ಹೊಸ ಸೇತುವೆಯಿಂದ ತುಂಗಾ ನದಿಗೆ ಧುಮುಕಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಯುವಕ ಹಾಗೂ ಯುವತಿ ಕೈಗೆ ವೇಲನ್ನು ಸುತ್ತುಕೊಂಡು ತುಂಗಾ ನದಿಗೆ ಹಾರಿದ್ದಾರೆ. ಸ್ಥಳೀಯರ ನೆರವಿನಿಂದ ಯುವತಿಯರನ್ನು ರಕ್ಷಿಸಿ ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅದರೆ ಚಿಕಿತ್ಸೆ ಫಲಿಸದೆ ಸಾವಾನಪ್ಪಿದ್ದಾರೆ. ಸ್ಧಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗಮಿಸಿದ್ದು ಯುವಕನ ಶವಕ್ಕಾಗಿ ತುಂಗಾ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ
ಯುವಕನನ್ನು ಹುರುಳಿಹಳ್ಳಿ ಗ್ರಾಮದ ಸಂತೋಷ(25) ಹಾಗೂ ಯುವತಿಯರನ್ನು ಕಾಕನಹಸುಡಿ ಗ್ರಾಮದ ಅನುಷಾ(20) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published. Required fields are marked *

*