ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಲಾಂಚ್ ನಡುನೀರಿನ ಮಧ್ಯೆ ಸಿಲುಕಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕೊನೆಗೂ ಲಾಂಚ್ ಸೇಫಾಗಿ ದಡ ಸೇರಿದ್ದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹಸಿರುಮಕ್ಕಿ ಲಾಂಚ್ ಹೊಸನಗರ ತಾಲೂಕು ಕೆ.ಬಿ.ಕ್ರಾಸ್ ನ ಕಡೆಯಿಂದ ಸಾಗರ ತಾಲೂಕಿನ ಹುಲಿದೇವರ ಬನದ ಕಡೆಗೆ ಹಿನ್ನೀರಿನಲ್ಲಿ ಪ್ರಯಾಣ ಆರಂಭಿಸಿತ್ತು. ಆದರೆ ಇದೇ ವೇಳೆಗೆ ಬಾರಿ ಗಾಳಿ ಆರಂಭಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಲಾಂಚ್ ನಡುನೀರಿನಲ್ಲೇ ಸಿಲುಕಿಕೊಂಡಿದೆ. ಗಾಳಿಯ ರಭಸ ಹೆಚ್ಚಾದಂತೆ ಲಾಂಚ್ ಇನ್ನೊಂದೆಡೆಗೆ ತೆರಳಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಮಾಡಿರುವ ಪಿಲ್ಲರ್ ಗೆ ಸಿಕ್ಕಿಕೊಂಡಿದೆ. ಆಗ ದಡದಲ್ಲಿದ್ದವರು ತೆಪ್ಪದಲ್ಲಿ ತೆರಳಿ ಲಾಂಚ್ ಗೆ ಹಗ್ಗ ಕಟ್ಟಿ ಸಮೀಪದಲ್ಲೇ ಇದ್ದ ಪಿಲ್ಲರ್ ಗೆ ಕಟ್ಟಿ ಲಾಂಚ್ ಬೇರೆಡೆಗೆ ಹೋಗದಂತೆ ಮುಂಜಾಗ್ರತೆ ವಹಿಸಿದ್ದಾರೆ. ಬಳಿಕ ಕ್ರೇನ್ ನವರಿಗೆ ಮಾಹಿತಿ ನೀಡಿ ಲಾಂಚನ್ನು ದಡಕ್ಕೆ ಎಳೆಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಗಾಳಿಯ ರಭಸ ಕಡಿಮೆಯಾಗಿದ್ದರಿಂದ ಲಾಂಚ್ ಚಾಲಕ ನಿಧಾನವಾಗಿ ಲಾಂಚನ್ನು ಹುಲಿದೇವರ ಬನ ಭಾಗದ ದಡಕ್ಕೆ ತಂದಿದ್ದಾರೆ. ಅಲ್ಲಿಯವರೆಗೂ ಆತಂಕದಲ್ಲಿದ್ದ ಲಾಂಚ್ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಲಾಂಚ್ ದಡ ಸೇರುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.
- ಜನವಿರೋಧಿ ಕಾಂಗ್ರೆಸ್ ಗೆ ನಿಯಂತ್ರಣ ಹಾಕಬೇಕಿದೆ : ಶಾಸಕ ಹರೀಶ್ ಪೂಂಜ ...
- ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ ...
- ಪಾಪಿಯೊಬ್ಬ ಪಾಪ್ಯುಲರ್ ಆಗಿದ್ದಾನೆ.. ...
- ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ ...
- ಅರಮನೆ ಅಂತ ಮತದಾನ ಕೇಂದ್ರ, ಮತದಾನ ಮಾಡಿದವರೇ ಪ್ರಭು… ...
- ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ – ರಾಹುಲ್ ಗಾಂಧಿ. ...
- ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸೋಲಿನ ಭಯದಿಂದ ತೊಂದರೆ ನೀಡಿದ್ದಾರೆ. ...
- ಮೇ. 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ. ...
- ಅಹಂಕಾರದಿಂದ ಚುನಾವಣೆ ನಡೆಸಿದರೆ , ಜನ ಪಾಠ ಕಲಿಸುತ್ತಾರೆ. ಅಕ್ಕ ತಮ್ಮ ಅಂತಾ ನೋಡೊಲ್ಲ.. ...
- ಖಾಸಗಿ ಬಸ್ ನಿಲ್ದಾಣದ ಮೊಬೈಲ್ ಅಂಗಡಿಯಲ್ಲಿ ಬೆಂಕಿ ಅವಘಡ. ...
Recent Comments