Breaking News

ಕೊರೊನಾ ಎದುರಿಸಲು ಮೆಗ್ಗಾನ್ ನಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ – ಹೆಚ್ ಎನ್ ಸುಂದರೇಶ್

ಎಲ್ಲರ ನಿದ್ದೆಗೆಡಿಸಿರುವ ಕರೋನಾ ವೈರಸ್ ಇದೀಗ ದೇಶಾದ್ಯಂತ ಹರಡುತ್ತಿದೆ. ಈಗಾಗಲೇ ನಮ್ಮ ರಾಜ್ಯದಲ್ಲೂ ಸಹ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದಕ್ಕಾಗಿ ಎಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ. ಆದರೆ ನಮ್ಮ ಶಿವಮೊಗ್ಗದಲ್ಲಿ ಕರೋನಾ ತಡೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರಂಭಿಸಿರು ಕರೋನಾ ಸ್ಪೆಷಲ್ ವಾರ್ಡ್ ನಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಸೂಕ್ತ‌ ರಕ್ಷಣಾ‌ಸಲಕರಣೆಗಳೇ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೋನಾ ತಡೆಗಾಗಿ ಸ್ಪೆಷಲ್ ವಾರ್ಡ್ ಆರಂಭಿಸಲಾಗಿದೆ. ಆದರೆ ವೈದ್ಯರು ಹಾಗೂ ಸಿಬ್ಬಂದಿಗೆ ಬೇಕಾದ ಮಾಸ್ಕ್ ಗಳು ಹಾಗೂ ಗೌನ್ ಗಳೇ ಇಲ್ಲದಂತಾಗಿದೆ. ಇದರಿಂದಾಗಿ ಒಂದು ವೇಳೆ ಶಿವಮೊಗ್ಗದಲ್ಲಿ‌ ಕರೋನಾ ವೈರಸ್ ಪತ್ತೆಯಾದರೆ ಆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಹಿಂದೇಟು ಹಾಕುವ ಸಾಧ್ಯತೆಯಿದೆ. ಕೂಡಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗಮನಹರಿಸಬೇಕು ಎಂದು ಒತ್ತಾಯಿಸಿದರು.

https://youtu.be/nFFy68DIsZI

 

 

Leave a Reply

Your email address will not be published. Required fields are marked *

*