ನಾಳೆ ಕೋಟೆ ಶ್ರೀ ಸೀತಾರಾಮಾಂಜನೇಯ
ದೇವಸ್ಥಾನದ ಆವರಣದಲ್ಲಿ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶಕ್ತಿ ದೇವತೆಗಳ ಸಮಾಗಮ ಸಮಿತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಪ್ರತಿ ವರ್ಷ ಎಳ್ಳಮವಾಸೆ ದಿನದಂದು ನಡೆಯುತ್ತಿತ್ತು, ಅದೇ ಈ ಬಾರಿ 21ನೆ ವರ್ಷದ ಆಚರಣೆಯಲ್ಲಿ
ಸೂರ್ಯಗ್ರಹಣದ ಪ್ರಯುಕ್ತ ನಾಳೆ
ಬೆಳಗ್ಗೆ ಸುಮಾರು 11 ಗಂಟೆಗೆ ನಗರದ 50 ದೇವತೆಗಳ ಸಮಾಗಮವಿದ್ದು, ಮದ್ಯಾಹ್ನ 12:30 ರಿಂದ
1:00 ಗಂಟೆಯ ಸಮಯದಲ್ಲಿ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ,ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ..
ಸಂಜೆ ಸಂಜೆ ಸಾವಿರಾರು ಮಾತೆಯರು ಬಂದು ದೇವಿಗೆ ಮಡ್ಡಕ್ಕಿ ಸಮರ್ಪಣೆಗೆ ಅವಕಾಶವಿದೆ. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಡೆಸಲಾಗುವುದು ಎಂದು ತಿಳಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ .ಡಿ.ಎಸ್ ಅರುಣ್ ,
ಕಾರ್ಯಧ್ಯಕ್ಷರು ರಮೇಶ್ ಬಾಬುಜಾದವ್,
ಗೌರವ ಅಧ್ಯಕ್ಷರು ಸುರೇಶ್ ಕುಮಾರ್ ಬಾಳೆಗುಂಡಿ.
ಪ್ರಧಾನ ಕಾರ್ಯದರ್ಶಿ ಹೆಚ್.ಕೆ ದೀನದಯಾಳು,ಸಂಚಾಲಕರು
ಎಸ್.ಜಿ ಚಂದ್ರಶೇಖರ್ ಉಪಸ್ಥಿತರಿದ್ದರು.
C News TV Kannada News Online in cnewstv