ಭರಾಟೆ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾಯಕ ನಟ ಶ್ರೀಮುರುಳಿ ಸೇರಿದಂತೆ ಭರಾಟೆ ಚಿತ್ರತಂಡ ಶಿವಮೊಗ್ಗಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಹೆಚ್.ಪಿ.ಸಿ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶ್ರೀಮುರುಳಿಯನ್ನು ಅಭಿಮಾನಿಗಳು ಡೊಳ್ಳುಕುಣಿತದ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳೊಂದಿಗೆ ಮುರುಳಿ ಸಹ ಕುಣಿದು ಕುಪ್ಪಳಿಸಿದರು ಮತ್ತೊಂದೆಡೆ ನಮ್ಮ ಯುವಜನತೆ ಶ್ರೀಮುರುಳಿ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು..
C News TV Kannada News Online in cnewstv