Breaking News

ಮಾನಸಿಕ ಅಸ್ವಸ್ಥೆಗೆ ಹಿಗ್ಗಾಮುಗ್ಗಾ ಥಳಿತ.

ಶಿವಮೊಗ್ಗ: ಮಾನಸಿಕ ಅಸ್ವಸ್ಥೆಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೆ.ಸಿ.ರಸ್ತೆಯಲ್ಲಿ‌ ನಡೆದಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಸಾಗರದ ನೆಹರೂ ನಗರ ನಿವಾಸಿ ಕವಿತಾ ಥಳಿತಕ್ಕೊಳಗಾದ ದುರ್ದೈವಿ. ಸಾಗರದ ಜೆ.ಸಿ.ರಸ್ತೆಯ ಅಂಗಡಿಗಳ ಮುಂದೆ‌ ನಿಂತು ಅವಾಚ್ಯವಾಗಿ ನಿಂದಿಸುತ್ತಿದ್ದಳು ಎಂಬ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿದ್ದವರು ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಹೊಡೆದಿದ್ದು ಮಾತ್ರವಲ್ಲದೆ ಕಾಲಿನಿಂದ ಒದ್ದು ಕೊಲಿನಿಂದ ಥಳಿಸಿ ಮೃಗೀಯ ವರ್ತನೆ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ‌ ಆಕೆಯ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದ ಕವಿತಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

Leave a Reply

Your email address will not be published. Required fields are marked *

*