Breaking News

ಕಾರ್ನಾಡ್ ನಿಧನ: ಮೂರು ದಿನ ಶೋಕ, 1 ದಿನ ರಜೆ

 

ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಶಾಲೆ, ಕಾಲೇಜು  ಕಚೇರಿಗಳಿಗೆ  ಒಂದು ದಿನ ರಜೆ ಘೋಷಿಸಲಾಗಿದೆ ಹಾಗೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.

ಸಾಹಿತಿ ಗಿರೀಶ್​ ಕಾರ್ನಾಡ್​ ಅವರ ಅಂತ್ಯ ಸಂಸ್ಕಾರ ಬಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲಿ ವಿದ್ಯುತ್​ ಚಿತಾಗಾರದಲ್ಲಿ ನಡೆಯಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ…

ಗಿರೀಶ್​ ಕಾರ್ನಾಡ್​ ಅವರ ಅಂತಿಮ ಸಂಸ್ಕಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳೂ ಇಲ್ಲ. ಯಾವುದೇ ಧರ್ಮ, ಜಾತಿಯ ಪದ್ಧತಿಯಂತೆ ನಡೆಯುವುದಿಲ್ಲ. ಸರ್ಕಾರಿ ಗೌರವ ಸಲ್ಲಿಸುವುದೂ ಇಲ್ಲ. ಹಾಗೇ ಸಾರ್ವಜನಿಕ ದರ್ಶನದ ವ್ಯವಸ್ಥೆಯಿಲ್ಲ ಎಂದು ಕಾರ್ನಾಡ್​ ಅವರ ಪುತ್ರ ರಘು ಕಾರ್ನಾಡ್​ ಹಾಗೂ ಶಿಷ್ಯ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

*