Breaking News

ದೇಶ ಮಾರುವವರ ಎದುರು ಚಾಯ್ ಮಾರುವವ ಉತ್ತಮ

 

ಪ್ರಧಾನಿ ಮೋದಿಗೆ ಷಂಡ ಎಂದು ಪದಬಳಕೆ ಮಾಡಿದ ಕಾಂಗ್ರೇಸ್ ಶಾಸಕರ ಹಾಗೂ ಪಕ್ಷದ ವಿರುದ್ಧ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಷಂಡ ಪದ ಬಳಕೆ ಸರಿಯಲ್ಲ. ದೇಶದ ಮೇಲೆ ಹಲವು ದಾಳಿಗಳಾದ ಸಂದರ್ಭದಲ್ಲಿ ನಾಮರ್ಧರಾಗಿದ್ದವರು ಕಾಂಗ್ರೆಸ್ ನವರೇ ಹೊರತು, ಮೋದಿಯಲ್ಲ. ಮೋದಿಯವರು ಈಗಾಗಲೇ ಅದನ್ನು ಸಾಬೀತು ಮಾಡಿದ್ದಾರೆ. ಮೋದಿ ಭಾರತದ ಗೌರವವನ್ನು ಎತ್ತಿಹಿಡಿದಿದ್ದಾರೆ. ಜನಾರ್ಧನ ಪೂಜಾರಿ, ಶೀಲಾದೀಕ್ಷಿತ್ ಸೇರಿದಂತೆ ಹಲವು ನಾಯಕರು ಮೋದಿ ಹಾಗೂ ಮೋದಿಯ ಕಾರ್ಯವನ್ನು ಹೊಗಳುತ್ತಿದ್ದಾರೆ.ಸೈನಿಕರ ದಾಳಿಗೆ ಸಾಕ್ಷಿ ಕೇಳಿದವರು ಷಂಡರಾಗುತ್ತಾರೆ. ನರೇಂದ್ರ ಮೋದಿಯವರು, ಷಂಡ ಹೌದೋ, ಅಲ್ಲವೋ ಎಂಬುದು, ಈ ಚುನಾವಣೆ ನಿರ್ಧಾರ ಮಾಡುತ್ತೆ… ಇನ್ನೂ ಶಿವಮೊಗ್ಗ ಚುನಾವಾಣಾ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಳ್ಳಲಿ ಇಲ್ಲ ಇನ್ಯಾರೇ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದು ಖಡಕ್ ಉತ್ತರ ನೀಡಿದರು..

.

Leave a Reply

Your email address will not be published. Required fields are marked *

*