Breaking News

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನದಂತೆ ಅಂಗಡಿ, ಮುಂಗಟ್ಟುಗಳು ತೆರೆದಿವೆ. ಹೂವಿನ ಅಂಗಡಿಗಳು, ತಿಂಡಿ ಗಾಡಿಯವರು, ಚಿಲ್ಲರೆ ವ್ಯಾಪಾರಸ್ಥರು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ.

 

ನಗರದಲ್ಲಿ ಎಂದಿನಂತೆ ಆಟೋ, ಖಾಸಗಿ ಬಸ್, ಲಾರಿ ಸಂಚಾರವಿದೆ..ಬಂದ್‌ ಗೆ ಕೆಎಸ್‌ಆರ್‌ಟಿಸಿ ಬೆಂಬಲ ಸೂಚಿಸಿದೆ ಹಾಗಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ, ಎಲ್ಲಾ ಖಾಸಗಿ ಬಸ್ ಗಳ ಸಂಚಾರವಿದೆ. ಬಂದ್ ಗೆ ಬೆಂಬಲ ನೀಡುತ್ತಿರುವ ಅಂಚೆ ಕಚೇರಿ, ಬ್ಯಾಂಕ್ ಗಳನ್ನೂ ಹೊರತುಪಡಿಸಿ ಜನಜೀವನದ ಎಂದಿನಂತೆ ಇದೆ.

Leave a Reply

Your email address will not be published. Required fields are marked *

*