Breaking News

ನಿವೇಶನ ಹಂಚಿಕೆಯಲ್ಲಿ ಅಕ್ರಮ, ಸೂಕ್ತ ತನಿಖೆಗೆ ಒತ್ತಾಯ – ಅಣ್ಣಾ ಹಜಾರೆ ಹೋರಾಟ ಸಮಿತಿ

ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಅಕ್ರಮ ನಡೆದಿರುವುದು ನಿವೃತ್ತ
ನ್ಯಾ. ರವೀಂದ್ರನಾಥ್ ವರದಿ ಆಧಾರದಿಂದ ಮೇಲ್ನೋಟಕ್ಕೆ ಸಾಬೀತಾಗಿದೆ.
ಪ್ರಾಧಿಕಾರದಿಂದ 1801 ನಿವೇಶನಗಳ ಬಡಾವಣೆ ನಿರ್ಮಾಣ ಮಾಡಿ, 2010 ರಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿ 2012 ರಲ್ಲಿ ನಿವೇಶನದ ಹಂಚಿಕೆ ಮಾಡಲಾಗಿದೆ. ಶೇ 80 ಕ್ಕಿಂತ ಹೆಚ್ಚು ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು. ಈ ಸಂಪೂರ್ಣ ವಿಚಾರ ಹಾಗೂ ಕಡತಗಳು ಲೋಕಾಯುಕ್ತ ಇಲಾಖೆಯ ಅಂಗಳದಲ್ಲಿ ನನೆಗುದ್ದಿಗೆ ಬಿದ್ದಿದ್ದು ನಾಲ್ಕು ವರ್ಷಗಳಿಂದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಇಂದು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

*