Breaking News

“ದೀಪಾವಳಿ ಹಬ್ಬ” ಮಣ್ಣಿನ ಹಣತೆಗಳ ಮಾರಾಟ ಜೋರು

Cnewstv / 11.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

“ದೀಪಾವಳಿ ಹಬ್ಬ” ಮಣ್ಣಿನ ಹಣತೆಗಳ ಮಾರಾಟ ಜೋರು

ಶಿವಮೊಗ್ಗ : ಶಿವಮೊಗ್ಗ ನಗರ ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಒಂದು ಕಡೆಯಾದರೆ ಮತ್ತೊಂದೆಡೆ ದೀಪಾವಳಿ ಎಂದ ಕೂಡಲೇ ನೆನಪಾಗುವುದು ಮಣ್ಣಿನ ಹಣತೆಗಳು. ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಣ್ಣಿನ ಹಣತೆಗಳ ಮಾರಾಟ ಆರಂಭವಾಗಿದೆ.

ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ, ತಳ್ಳುವ ಗಾಡಿಗಳಲ್ಲಿ ಮಣ್ಣಿನ ಹಣತೆಗಳನ್ನ ಮಾರಾಟ ಜೋರಾಗಿಯೇ ಇದೆ. 5 ರೂಪಾಯಿಯಿಂದ 250 ರೂಪಾಯಿಯವರೆಗೂ ವಿವಿಧ ಆಕಾರದ ವಿವಿಧ ಗಾತ್ರದ ಮನಸೆಳೆಯುವ ಮಣ್ಣಿನ ಹಣತೆಗಳನ್ನ ಮಾರಾಟ ಮಾಡಲಾಗುತ್ತಿದೆ.

ಕೆಲವು ವರ್ಷಗಳಿಂದ ಪಿಂಗಾಣಿ, ಪ್ಲಾಸ್ಟಿಕ್ ಹಣತೆಗಳಿಗೆ ಜನರು ಮೊರೆ ಹೋಗಿದ್ದರು. ಇದರಿಂದ ಕುಂಬಾರಿಕೆಯ ವೃತ್ತಿ ಮಾಡುವವರ ಆದಾಯಕ್ಕೆ ಹೊಡೆತ ಮಾತ್ರವಲ್ಲದೆ ಪರಿಸರಕ್ಕೂ ಮಾರಕವಾಗಿತ್ತು. ಆದರೆ ಇದೀಗ ಮತ್ತೆ ಜನ ಮಣ್ಣಿನ ಹಣತೆಗಳ ಪ್ರಾಮುಖ್ಯತೆಯನ್ನು ತಿಳಿದು ಮಣ್ಣಿನ ಹಣತೆಗಳ ಮೊರೆ ಹೋಗುತ್ತಿದ್ದಾರೆ.

ಕೊರೊನಾ ನಂತರ ಮಣ್ಣಿನ ಹಣತೆಗಳನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿತ್ತು. ಜನರು ಫ್ಯಾನ್ಸಿ ಹಾಗೂ ವಿದ್ಯುತ್ ಅಲಂಕಾರಿತಾದೀಪಗಳ ಮೊರೆ ಹೋಗಿದ್ದರು. ಆದರೆ ಈ ಬಾರಿ ಮತ್ತೆ ಮಣ್ಣಿನ ಹಣತೆಗಳನ್ನ ಹಚ್ಚಲು ಮುಂದಾಗಿದ್ದಾರೆ. ಕಳೆದ ಬಾರಿಗಿಂತಲೂ ಜನ ಹೆಚ್ಚಾಗಿ ಮಣ್ಣಿನ ಹಣತೆಗಳನ್ನ ಕೊಳ್ಳಲು ಬರುತ್ತಿದ್ದಾರೆ. ವ್ಯಾಪಾರವೂ ಕೂಡ ಈ ಬಾರಿ ಚೆನ್ನಾಗಿ ನಡೆಯುತ್ತಿದೆ..

ಶ್ರೀ ಲೀಲಾ

 

#Claylamp #DeepawaliFestival #Saleofclaymoney #ಮಣ್ಣಿನಹಣತೆಗಳಮಾರಾಟ #thepotter #ಕುಂಬಾರಕುಟುಂಬ #Shivamogga

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments