Cnewstv / 28.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹುಬ್ಬಳ್ಳಿ ಏನು ಪಾಕಿಸ್ತಾನದಲ್ಲಿದ್ಯಾ ??
ಶಿವಮೊಗ್ಗ : ಬಿಜೆಪಿಯವರು ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದಂತಹ ಕೆಎಸ್ ಈಶ್ವರಪ್ಪನವರು, ಜಗದೀಶ್ ಶೆಟ್ಟರಿಗೆ ಭ್ರಮೆ, ಎಲ್ಲರೂ ನನ್ನ ಹತ್ತಿರ ಬರುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾರೆ.. ಅದು ಸುಳ್ಳು. ಹುಬ್ಬಳ್ಳಿ ಏನ್ ಪಾಕಿಸ್ತಾನದಲ್ಲಿ ಇದೆಯಾ ? ಹುಬ್ಬಳ್ಳಿ ಕರ್ನಾಟಕ ರಾಜ್ಯದ ಒಂದು ಅಂಗ. ಪಕ್ಷದ ಎಲ್ಲಾ ನಾಯಕರು ಎಲ್ಲಾ ಕ್ಷೇತ್ರಗಳಿಗೆ ಹೇಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೋ ಹಾಗೆಯೇ ಅಲ್ಲಿ ಕೂಡ ಪ್ರಚಾರ ಮಾಡುತ್ತಿದ್ದಾರೆ ಎಂದರು…
ನಿಮ್ಮನ್ನ ಮುಖ್ಯಮಂತ್ರಿ ಸ್ಥಾನದವರೆಗೂ ಕೊರಿಸಿದ್ದು ಬಿಜೆಪಿ ಪಕ್ಷ, ಇಂದು ಈ ಪಕ್ಷದ ನಾಯಕರ ಬಗ್ಗೆಯೇ ನೀವು ಹಗುರವಾಗಿ ಮಾತನಾಡುತ್ತಿದ್ದೀರಾ ?? ಖಂಡಿತ ಇದು ಒಳ್ಳೆಯದಲ್ಲ. ಪಕ್ಷದ ನಾಯಕರು ಎಲ್ಲಿಗೆ ಹೋಗಬೇಕು ಎಂಬುದನ್ನು ಶೆಟ್ಟರ್ ಅವರ ಅನುಮತಿಯನ್ನು ಪಡೆದು ಹೋಗುವಂತೆನಿಲ್ಲ ಎಂದರು..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments