Breaking News

ನಾಡಗೀತೆ ಹಾಡುವಾಗ ಅಚಾತುರ್ಯ, ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪ.

Cnewstv / 27.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಾಡಗೀತೆ ಹಾಡುವಾಗ ಅಚಾತುರ್ಯ, ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪ.

ಶಿವಮೊಗ್ಗ : ಕನ್ನಡ ನಾಡಗೀತೆಗೆ ಅವಮಾನ ಆಗುತ್ತಿದ್ದನ್ನು ಕಂಡು ಎಚ್ಚೆತ್ತುಕೊಂಡ ಕೆ ಎಸ್ ಈಶ್ವರಪ್ಪನವರು ತಕ್ಷಣವೇ ಸರಿಮಾಡಿದ ಘಟನೆ ಇಂದು ನಡೆದಿದೆ.

ಶಿವಮೊಗ್ಗದ ಎನ ಇ ಎಸ್ ಮೈದಾನದಲ್ಲಿ ಇಂದು ಬಿಜೆಪಿ ತಮಿಳು ಬಾಂಧವರ ಸಮಾವೇಶ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಅಗಮಿಸಿದ್ದರು. ಈ ವೇಳೆ
ನಾಡಗೀತೆ ಹಾಡುವಾಗ ಅಚಾತುರ್ಯ ನಡೆದಿದೆ.

 

https://youtu.be/mL1r5fLvvG8

 

ನಾಡಗೀತೆ ಹಾಕಿ ಎಂದಾಗ ಅಯೋಜಕರು ತಮಿಳು ನಾಡಗೀತೆ ಹಾಕಿದ್ದಾರೆ. ತಕ್ಷಣವೇ ವೇದಿಕೆಯಲ್ಲಿ ಇದ್ದ ಕೆ ಎಸ್ ಈಶ್ವರಪ್ಪ ಮಧ್ಯೆ ಪ್ರವೇಶ‌ ಮಾಡಿ, ನಾಡಗೀತೆ ಹಾಡುವುದಕ್ಕೆ ಬರುವುದಿಲ್ವ ಎಂದು ಪ್ರಶ್ನಿಸಿ, ಕನ್ನಡದ ನಾಡಗೀತೆ ಹಾಕಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*