Cnewstv / 23.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಾನು ಶಿವಮೊಗ್ಗ ನಗರ ಕ್ಷೇತ್ರದ ಶಾಸಕನಾಗಬೇಕು ಮಂತ್ರಿ ಅಲ್ಲ..
ಶಿವಮೊಗ್ಗ : ನಾನು ಶಿವಮೊಗ್ಗ ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ. ನನಗೆ ಶಿವಮೊಗ್ಗ ನಗರ ಶಾಸಕನಾದರೆ ಸಾಕು ಮಂತ್ರಿ ಆಗಬೇಕಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹೇಳಿದರು.
ಪಕ್ಷ ಗೆಲ್ಲಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಹೊಸನಗರದಲ್ಲಿ ಗೆದ್ದಿದ್ದೇನೆ. ನಂತರ ಬಂಗಾರಪ್ಪನವರ ವಿರುದ್ಧ ಮೊಟ್ಟಮೊದಲ ಬಾರಿಗೆ ಲೋಕಸಭಾ ಕ್ಷೇತ್ರ ಗೆದ್ದಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲ. ಹೊಸನಗರದ ಶಾಸಕನಾಗಿ ಬಿ.ಜೆ.ಪಿ ಬಾವುಟ ಹಾರಿಸಿದ್ದೇನೆ. ಒಂಟಿ ಕಾಲಲ್ಲಿ ನಿಂತು ಜನಪರ ಹೋರಾಟ ಮಾಡಿದ್ದೇನೆ. ನಾನು ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಮಾಡಿಲ್ಲ, ಹೆಸರು ಕೆಡಿಸಿಕೊಂಡಿಲ್ಲ. ನಾನು ನನಗೆ ಮಾತ್ರ ಟಿಕೆಟ್ ಕೇಳಿದ್ದೇನೆ ನನ್ನ ಮಗನಿಗೆ ಅಲ್ಲ ಎಂದರು.
ಸಂಪೂರ್ಣ ಮಾಹಿತಿಗಾಗಿ..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv