Breaking News

ಮಹಾನಗರ ಪಾಲಿಕೆ ಬಜೆಟ್ ಕನ್ನಡಿ ಒಳಗಿನ ಗಂಟು.

Cnewstv / 24.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಹಾನಗರ ಪಾಲಿಕೆ ಬಜೆಟ್ ಕನ್ನಡಿ ಒಳಗಿನ ಗಂಟು.

ಶಿವಮೊಗ್ಗ : ಮಹಾನಗರ ಪಾಲಿಕೆ ಬಜೆಟ್ ಕನ್ನಡಿ ಒಳಗಿನ ಗಂಟು ಎಂದು ಅರೋಪಿಸಿ ವಿರೋಧ ಪಕ್ಷದ ಪಾಲಿಕೆ ಸದಸ್ಯರುಗಳು ಕನ್ನಡಿ ಹಿಡಿದು ಅಣಕು ಪ್ರದರ್ಶನ ಮಾಡಿದರು.

ಇಂದು ಶಿವಮೊಗ್ಗ ಮಹಾನಗರ ಪಾಲಿಕೆ 2022-23ನೇ ಸಾಲಿನ ಬಜೆಟ್ ಮಂಡನೆ ಆಡಳಿತ ಪಕ್ಷದವರು ಮಂಡಿಸಿದರು. ಈ ವೇಳೆ ಬಿಜೆಪಿಯವರ ಆಡಳಿತ ಅವಧಿಯ ಐದನೇ ಬಜೆಟ್ ಇದಾಗಿದ್ದು ಇಲ್ಲಿಯವರೆಗೂ 2018 ರಿಂದ 2023ರ ವರೆಗೆ ಮಂಡಿಸಿದ ಬಜೆಟ್ ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ತರುತ್ತೇವೆ ಎಂದು ಬರೀ ಪುಸ್ತಕದ ಘೋಷಣೆಗೆ ಸೀಮಿತವಾದ ಕಾರ್ಯರೂಪಕ್ಕೆ ತರದ ಭರವಸೆಗಳನ್ನು ಅನುಷ್ಠಾನಗೊಳಿಸದೆ.

ಭರವಸೆಯಾಗಿ ಉಳಿಸಿ ಶಿವಮೊಗ್ಗ ಮಹಾನಗರದ ಜನತೆಗೆ ದ್ರೋಹ ಎಸಗಿರುವ ಬಿಜೆಪಿ ಆಡಳಿತ ವಿರುದ್ಧ ಮಹಾನಗರ ಪಾಲಿಕೆಯ ಕಾಂಗ್ರೆಸ್ ಜೆಡಿಎಸ್ ಪಾಲಿಕೆ ಸದಸ್ಯರುಗಳು ಕನ್ನಡಿ ಹಾಗೂ ಗಂಟನ್ನು ಹಿಡಿದು ಶಿವಮೊಗ್ಗದ ಮಹಾ ಜನತೆಗೆ ಕನ್ನಡಿ ಒಳಗಿನ ಗಂಟನ್ನು ತೋರಿಸುತ್ತಿದ್ದಾರೆ ಎಂದು ಅಣಕು ಪ್ರದರ್ಶನ ಮಾಡಿದರು.

ಪ್ರತಿಭಟನೆ ನೇತೃತ್ವವನ್ನು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮೇಹಕ್ ಶರೀಫ್ ರವರು ಪಾಲಿಕೆ ಸದಸ್ಯರುಗಳಾದ ಎಚ್ ಸಿ ಯೋಗೀಶ್, ಬಿ ಎ ರಮೇಶ ಹೆಗಡೆ, ಆರ್ ಸಿ ನಾಯ್ಕ್, ನಾಗರಾಜ್ ಕಂಕಾರಿ, ಶಬಾನ ಖಾನಂ ನೇತೃತ್ವ ವಹಿಸಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments