ಸಾರ್ವರ್ಕರ್ ಫ್ಲೆಕ್ಸ್ ವಿವಾದ : ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು ??
Cnewstv.in / 15.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಾರ್ವರ್ಕರ್ ಫ್ಲೆಕ್ಸ್ ವಿವಾದ : ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು ??
ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಾವರ್ಕರ್ ಒಬ್ಬರು ಅಪ್ಪಟ ದೇಶಪ್ರೇಮಿ. ಅವರ ಇಡೀ ಕುಟುಂಬವೇ ಸ್ವತಂತ್ರ ಹೋರಾಟಕ್ಕಾಗಿ ಧುಮುಕಿತ್ತು.
ಕಾಂಗ್ರೆಸ್ ಬೆಂಬಲಿತ ಎಸ್ ಟಿಪಿಐ ಇವತ್ತು ಶಿವಮೊಗ್ಗದಲ್ಲಿ ಅವರ ಫ್ಲೇಕ್ಸ್ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದೆ ಹಾಗೂ ಅದರ ಜೊತೆಯಲ್ಲಿ ಇದ್ದಂತಹ ರಾಷ್ಟ್ರಧ್ವಜವನ್ನು ಕೆಳಗೆ ಹಾಕಿ ಅವಮಾನ ಮಾಡಿದ್ದಾರೆ. ಇದೊಂದು ರಾಷ್ಟ್ರದ್ರೋಹಿ ಕೃತ್ಯ. ಯಾರ್ಯಾರು ಇದರಲ್ಲಿ ಭಾಗವಹಿಸಿದ್ದಾರೆ ಅವರೆಲ್ಲರನ್ನು ಭಯೋತ್ಪಾದಕರು ಎಂದು ಕರೆಯಬೇಕು. ತಕ್ಷಣವೇ ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದರು.