ಭಾರತ ಸ್ವತಂತ್ರದ ಅಮೃತ ಮಹೋತ್ಸವ : MRS ಸರ್ಕಲ್ ನಿಂದ ತ್ರಿವರ್ಣಧ್ವಜ ಹಿಡಿದು ನೂರಾರು ಕಾರ್ಯಕರ್ತರ ಬೈಕ್ ರ್ಯಾಲಿ.
Cnewstv.in / 08.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭಾರತ ಸ್ವತಂತ್ರದ ಅಮೃತ ಮಹೋತ್ಸವ : MRS ಸರ್ಕಲ್ ನಿಂದ ತ್ರಿವರ್ಣಧ್ವಜ ಹಿಡಿದು ನೂರಾರು ಕಾರ್ಯಕರ್ತರ ಬೈಕ್ ರ್ಯಾಲಿ.
ಶಿವಮೊಗ್ಗ : ಭಾರತ ಸ್ವತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗದ ಎಂ ಆರ್ ಎಸ್ ಸರ್ಕಲ್ ನಿಂದ ತ್ರಿವರ್ಣ ಧ್ವಜ ಹಿಡಿದು ಬೈಕ್ ರ್ಯಾಲಿ ನಡೆಸಲಾಯಿತು.
75ನೇ ವರ್ಷದ ಆಜಾದಿ ಕಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜೆಪಿ ನಗರ ಸಮಿತಿ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ವತಃ ಬೈಕ್ ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ಬಿವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಕೆ ಈ ಕಾಂತೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.