ನಮ್ಮ ಕಾರ್ಯಕರ್ತರಿಗೆ ಮೆಚ್ಯೂರಿಟಿ ಕಮ್ಮಿ – ಕೆ.ಎಸ್.ಈಶ್ವರಪ್ಪ.
Cnewstv.in / 29.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಮ್ಮ ಕಾರ್ಯಕರ್ತರಿಗೆ ಮೆಚ್ಯೂರಿಟಿ ಕಮ್ಮಿ – ಕೆ.ಎಸ್.ಈಶ್ವರಪ್ಪ.
ಶಿವಮೊಗ್ಗ : ನಮ್ಮ ಕಾರ್ಯಕರ್ತರಿಗೆ ಮೆಚ್ಯೂರಿಟಿ ಕಮ್ಮಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಹೇಳಿದ್ದಾರೆ.
ಕರಾವಳಿಯಲ್ಲಿ ನಡೆದ ಪ್ರವೀಣ್ ಹತ್ಯೆ ಬೆನ್ನಲ್ಲೇ ಯುವಮೋರ್ಚಾ ಕಾರ್ಯಕರ್ತರು ಸಾಲು-ಸಾಲು ರಾಜಿನಾಮೆ ನೀಡುತ್ತಿರುವುದರ ಬಗ್ಗೆ ಮಾತನಾಡಿದ ಈಶ್ವರಪ್ಪನವರು, ಪಂಡಿತ್ ದೀನದಯಾಳ್ ಉಪಾಧ್ಯಾಯರನ್ನ ರೈಲಿನಲ್ಲಿ ಕೊಲೆ ಮಾಡಲಾಯಿತು. ಶ್ಯಾಮ್ ಪ್ರಕಾಶ್ ಮುಖರ್ಜಿ ಅವರನ್ನು ಹತ್ಯೆ ಮಾಡಲಾಯಿತು. ಇವರೆಲ್ಲ ಆಕ್ರೋಶವನ್ನು ವ್ಯಕ್ತಪಡಿಸಿ, ಪಕ್ಷದಿಂದ ಹೊರ ಹೋಗಲಿಲ್ಲ. ರಾಜೀನಾಮೆ ನೀಡದೆ ಬಲಿದಾನ ಮಾಡಿದ್ದಾರೆ. ಹಿರಿಯರಾಗಿ ನಾವು ಅವರನ್ನು ಸಮಾಧಾನ ಮಾಡುತ್ತೇವೆ ಎಂದರು.