Breaking News

ಕರ್ನಾಟಕ ಪ್ರವಾಸೋದ್ಯಮ ನಿಗಮ ನಷ್ಟದಿಂದ ಲಾಭದ ಹಾದಿಗೆ.

Cnewstv.in / 25.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕರ್ನಾಟಕ ಪ್ರವಾಸೋದ್ಯಮ ನಿಗಮ ನಷ್ಟದಿಂದ ಲಾಭದ ಹಾದಿಗೆ.

ಬೆಂಗಳೂರು : ರಾಜ್ಯ ಸರಕಾರ ಸ್ವಾಮ್ಯದ ಕರ್ನಾಟಕ ಪ್ರವಾಸೋದ್ಯಮ ನಿಗಮವು ನಷ್ಟದ ಹಾದಿಯಿಂದ ಲಾಭದ ಹಾದಿಯೆಡೆಗೆ ಮುಖಮಾಡಿದೆ.

ಕೆಎಸ್ ಟಿಡಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವಾರು ಪ್ರವಾಸಿ ತಾಣಗಳಲ್ಲಿ ಹೋಟೆಲ್‌ ಗಳನ್ನು ನಡೆಸುತ್ತಿದೆ. ಹಲವಾರು ವರ್ಷಗಳಿಂದ ಹೋಟೆಲ್‌ಗಳು ಕಳಪೆ ನಿರ್ವಹಣೆ ಹಾಗೂ ಆಹಾರ ಪದಾರ್ಥಗಳ ಬಗ್ಗೆ ಸಾರ್ವಜನಿಕರಿಂದ ನಕಾರಾತ್ಮಕ ಭಾವನೆ ಇದು ನಷ್ಟದಲ್ಲಿ ನಡೆಯುತ್ತಿತ್ತು.

ನಿರ್ವಹಣೆಯ ವ್ಯವಸ್ಥೆಯ ಬದಲಾವಣೆ ಆದಾಗಿನಿಂದ ನಾಲ್ಕೇ ತಿಂಗಳಲ್ಲಿ 9 ಕೋಟಿ ರೂಪಾಯಿ ಲಾಭ ಗಳಿಸಿದ ಇನ್ನೂ ಕರುಣಾ ಸಂದರ್ಭದಲ್ಲಿ 18 ಕೋಟಿ ರೂಪಾಯಿ ಸಾಲ ಇತ್ತು. ಆದರೆ ಇದೀಗ ವಾರ್ಷಿಕ ವಹಿವಾಟು 46 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಇದೇ ವರ್ಷ ನೂರು ಕೋಟಿ ರೂಪಾಯಿ ವಹಿವಾಟಿನ ದಾಟಿಸುವ ಗುರಿಯನ್ನು ಹೊಂದಿದೆ.

ನೂತನ ನಿರ್ವಹಣೆಯಿಂದಾಗಿ ಖಾಸಗಿ ಸಂಸ್ಥೆಗಳಿಗೆ ಪೈಪೋಟಿಯನ್ನು ನೀಡುತ್ತಿದೆ. ಸರ್ಕಾರಿ ನೌಕರರಿಗೆ ಶೇಕಡ 15 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ರೂಮಿನ ಬಾಡಿಗೆ ಮತ್ತು ಅಡುಗೆಯಲ್ಲಿ ಶೇ 20ರಷ್ಟು ಕಡಿಮೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಇದನ್ನು ಒದಿ : https://cnewstv.in/?p=10622

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*