Breaking News

ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ ಮತ್ತು ಕಾಫಿತೋಟ.

Cnewstv.in / 11.07.2022 / ಚಿಕ್ಕಮಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ ಮತ್ತು ಕಾಫಿತೋಟ.

ಚಿಕ್ಕಮಗಳೂರು : ಮಲೆನಾಡಿನಾದ್ಯಂತ ವರುಣನ ಅಬ್ಬರಕ್ಕೆ ಜನ ತತ್ತರಿಸಿಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಸಂಪೂರ್ಣ ಅಡಿಕೆ ಮತ್ತು ಕಾಫಿ ತೋಟ ನಾಶವಾಗಿದೆ.

ಚಿಕ್ಕಮಂಗಳೂರಿನ ಅರೇನೂರು ಗ್ರಾಮದಲ್ಲಿ ರಾಮು ಮತ್ತು ವಾಸಂತಿ ಎಂಬ ದಂಪತಿಗಳಿಗೆ ಸೇರಿದ ಒಂದು ಎಕರೆ ಅಡಿಕೆ ಮತ್ತು ಕಾಫಿ ತೋಟ, ಮೆಣಸು ಬೆಳೆ ಸಂಪೂರ್ಣ ನಾಶವಾಗಿದೆ. ಬಂಡೆಕಲ್ಲು, ಮರಗಳು, ರಾಶಿರಾಶಿ ಮಣ್ಣು ಉರುಳುತ್ತಿದೆ. ತೋಟದಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದೆ.

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡಗಳು ಕುಸಿಯುತ್ತಿದೆ. ಕೆರೆಮಕ್ಕಿ ಗ್ರಾಮದಲ್ಲಿ ಗಾಳಿ-ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ.

ಇದನ್ನು ಒದಿ : https://cnewstv.in/?p=10443

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*