Breaking News

Uncategorized

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ. ಶಿವಮೊಗ್ಗ: ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗುಂಬೆ ಘಾಟಿ ರಸ್ತೆ ಕುಸಿಯುವ ಭೀತಿ ಇರುವುದರಿಂದ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ‌ ನಿಷೇಧಿಸಿ ಜಿಲ್ಲಾಧಿಕಾ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. 12 ಟನ್ ಗಿಂತಲೂ ಹೆಚ್ಚು ತೂಕದ ವಾಹನಗಳು ಮಳೆಗಾಲ ಮುಗಿಯುವವರೆಗೂ ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನುಳಿದಂತೆ ಮಿನಿಬಸ್, ಕಾರು, ಜೀಪ್, ಬೈಕ್ ಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. Contact for news and advertisement ...

Read More »

ಕಾರ್ನಾಡ್ ನಿಧನ: ಮೂರು ದಿನ ಶೋಕ, 1 ದಿನ ರಜೆ

  ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಶಾಲೆ, ಕಾಲೇಜು  ಕಚೇರಿಗಳಿಗೆ  ಒಂದು ದಿನ ರಜೆ ಘೋಷಿಸಲಾಗಿದೆ ಹಾಗೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ಸಾಹಿತಿ ಗಿರೀಶ್​ ಕಾರ್ನಾಡ್​ ಅವರ ಅಂತ್ಯ ಸಂಸ್ಕಾರ ಬಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲಿ ವಿದ್ಯುತ್​ ಚಿತಾಗಾರದಲ್ಲಿ ನಡೆಯಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ… ಗಿರೀಶ್​ ಕಾರ್ನಾಡ್​ ಅವರ ಅಂತಿಮ ಸಂಸ್ಕಾರಕ್ಕೆ ಸಂಬಂಧಪಟ್ಟಂತೆ ...

Read More »

ಬಿಜೆಪಿಯ ಬಿ.ವೈ.ರಾಘವೇಂದ್ರ ಮುನ್ನಡೆ

403 ಮತಗಟ್ಟೆಗಳ ಮತ ಎಣಿಕೆ ಪೂರ್ಣಗೊಂಡು ಬಿ.ಜೆ.ಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ171388 ಮತಗಳನ್ನು ಪಡೆದಿದ್ದು. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ 116768 ಮತಗಳನ್ನು ಪಡೆದು ಸುಮಾರು 51304 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.  

Read More »

ಕ್ರೇಜಿಸ್ಟಾರ್ ಮಗಳ ಮದುವೆಗೆ ಅದ್ದೂರಿ ಸೆಟ್ :3D ಆಮಂತ್ರಣ ಪತ್ರಿಕೆ

  ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ಮಗಳ ಮದುವೆಗೆ ಸಹ ಅಷ್ಟೊಂದು ಅತ್ಯಾಧುನಿಕವಾಗಿದೆ. ಮಗಳು ಗೀತಾಂಜಲಿ ಮತ್ತು ಅಜಯ್ ವಿವಾಹ ಈ ತಿಂಗಳು 28 ಮತ್ತು 29 ರಂದು ನಡೆಯಲಿರುವ ಬೆಂಗಳೂರು ಮೈದಾನದಲ್ಲಿ ಮೈದಾನ ನಡೆಯಲಿದೆ. ಮಗಳ ಮದುವೆಗೆ 3D ಆಮಂತ್ರಣ ಪತ್ರಿಕೆಯನ್ನು ಮಾಡಿದೆ. ಈ ರೀತಿ 3D ಮದುವೆ ಆಮಂತ್ರಣ ಪತ್ರಿಕೆಯು ಮಾಡುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು ಎಂದು. The 3D ಆಮಂತ್ರಣ ಪತ್ರಿಕೆ: ಸಾಮಾನ್ಯವಾಗಿ ಒಂದು ...

Read More »

ಮಾನವೀಯತೆ ಮೆರೆದ ಟ್ರೆಡಿಷನಲ್ ಡೇ.

ಶಿವಮೊಗ್ಗ: ಕಾಲೇಜುಗಳ ಟ್ರಡಿಷನಲ್‌ ಡೇ ಎಂದರೆ ವಿದ್ಯಾರ್ಥಿಗಳು  ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಭರ್ಜರಿಯಾಗಿಯೇ‌ ನಡೆಯುತ್ತದೆ. ವಿದ್ಯಾರ್ಥಿಗಳು ಈ ದಿನಗಾಗಿಯೇ ಕಾಯುತ್ತಿರುತ್ತಾರೆ…ಆದರೆ ಇವೆಲ್ಲವುಗಳೊಂದಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಮಾನವೀಯತೆ ಮೆರೆದ ಶಿವಮೊಗ್ಗ ಎಟಿಎನ್ ಸಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಎಟಿಎನ್ ಸಿ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಹಾಗೂ ಯುಗಾದಿ ಹಬ್ಬದ  ಅಂಗವಾಗಿ ತಮ್ಮ ಅಧ್ಯಾಪಕೊಂದಿಗೆ ಸೇರಿ ಅಕ್ಕಿ ಸಂಗ್ರಹಿಸಿ ಸಂಗ್ರಹವಾದ ಅಕ್ಕಿಯನ್ನು ತಾಯಿಮನೆ ಸಂಸ್ಥೆ ಗೆ  ನೀಡಿ ಮಾನವೀಯತೆ ಮೆರೆದಿದ್ದಾರೆ…

Read More »

2020ಕ್ಕೆ‌‌ ದೇಶಾದ್ಯಂತ ಬಿಎಸ್-4 ವಾಹನಗಳ ಮಾರಾಟ ನಿಷೇಧ..!

  ನವದೆಹಲಿ : ಮಿತಿಮೀರುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾಗಿರುವ ಸುಪ್ರೀಂಕೋರ್ಟ್, 2020ರ ಏಪ್ರಿಲ್ 1ರಿಂದ ಭಾರತ್ ಹಂತ-4(ಭಾರತ್ ಸ್ಟೇಜ್-ಬಿಎಸ್-4)ರ ವಾಹನಗಳ ಮಾರಾಟವನ್ನು ದೇಶದಾದ್ಯಂತ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಇಂಟರ್‍ನಲ್ ಕಂಬಷನ್(ಆಂತರಿಕ ದಹನಶೀಲ) ಎಂಜಿನ್‍ಗಳು ಹಾಗೂ ಸ್ಪಾರ್ಕ್ ಇಗ್ನಿಷನ್(ಬೆಂಕಿ ಕಿಡಿಯಿಂದ ಚಾಲನೆಯಾಗುವ) ಎಂಜಿನ್ ಸಾಧನಗಳಿಂದ ಹೊರ ಹೊಮ್ಮುವ ವಾಯು ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಅನುಸರಿಸುವ ಮಾನದಂಡವೇ ಭಾರತ್ ಸ್ಟೇಜ್. ಭಾರತ್ ಹಂತ ಹೊರಸೂಸುವಿಕೆ ಮಾನಕಗಳು(ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡಡ್ರ್ಸ್) ಇದನ್ನು ವಾಯು ಮಾಲಿನ್ಯ ಗುಣಮಟ್ಟ ಪರೀಕ್ಷಿಸಲು ಬಳಸಲಾಗುತ್ತದೆ. ...

Read More »